ಜೇವರ್ಗಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಗುಡೂರ (ಎಸ್.ಎ) ಗ್ರಾಮದ ತಾಂಡಾದಲ್ಲಿ ಕಲುಷಿತ ನೀರು ಸೇವಿಸಿದ 47 ಜನರುವಾಂತಿ– ಬೇಧಿಯಿಂದ ಬಳಲಿದ್ದು, ಅವರನ್ನು ಇಲ್ಲಿಯ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಣಾಪಾಯ ಇಲ್ಲ,ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ ಹೇಳಿದ್ದಾರೆ.
‘ತಾಲ್ಲೂಕಿನ ವಿವಿಧೆಡೆ ವಾರದ ಹಿಂದೆ ಮಳೆಯಾಗಿದ್ದು, ಬೋರ್ವೆಲ್ಗಳಲ್ಲಿ ಮಲಿನ ನೀರು ಬರುತ್ತಿದೆ. ಅದೇ ನೀರು ಸೇವಿಸಿದ್ದರಿಂದ ಅಸ್ವಸ್ಥಗೊಂಡಿರಬಹುದು’ ಎಂಬುದು ಮೂಲಗಳ ವಿವರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.