ಕುಂದಾಪುರ: ಜರ್ಮನಿಯ ಮ್ಯೂನಿಚ್ನಲ್ಲಿ ಹಂತಕನ ಚೂರಿ ಇರಿತಕ್ಕೆ ಬಲಿಯಾದ ಹೊಸನಗರ ಮೂಲದ ಬಿ.ವಿ.ಪ್ರಶಾಂತ ಅವರ ಕುಟುಂಬ ಸದಸ್ಯರು ಬೆಂಗಳೂರಿಗೆ ತೆರಳಿದ್ದು, ಜರ್ಮನಿಗೆ ತೆರಳುವ ಸಿದ್ಧತೆ ಸೋಮವಾರ ಪೂರ್ಣಗೊಂಡಿದೆ.
ವಿದೇಶ ಪ್ರಯಾಣಕ್ಕೆ ಅಗತ್ಯವಾಗಿರುವ ಪಾಸ್ಪೋರ್ಟ್, ವಿಮಾ ದಾಖಲೆ ಹಾಗೂ ದಾಖಲೆ ಪತ್ರಗಳ ತಾಂತ್ರಿಕ ಸಮಸ್ಯೆಗಳು ಬಹುತೇಕ ಪರಿಹಾರವಾಗಿದ್ದು, ಜರ್ಮನಿಯಿಂದ ವೀಸಾ ಬಂದ ಕೂಡಲೇ ಪ್ರಶಾಂತ ಅವರ ತಾಯಿ ವಿನಯ, ಸ್ಮಿತಾ ಅವರ ತಂದೆ ಡಾ.ಚಂದ್ರಮೌಳಿ, ತಾಯಿ ವಿದ್ಯಾ ಹಾಗೂ ಪ್ರಶಾಂತ ಅವರ ಜರ್ಮನಿಯ ಕುಟುಂಬ ಸ್ನೇಹಿತ ಗಣೇಶ್ ಭಾರತದಿಂದ ಪ್ರಯಾಣ ಬೆಳೆಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.