ADVERTISEMENT

ಸಮ್ಮೇಳನಾಧ್ಯಕ್ಷತೆ: ವಿರೋಧಕ್ಕೆ ಖಂಡನೆ

ಸಾಹಿತಿ ಚಂದ್ರಶೇಖರ ವಸ್ತ್ರದಗೆ ಡಾ.ಡಿ.ಎಸ್‌. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 20:01 IST
Last Updated 14 ಡಿಸೆಂಬರ್ 2019, 20:01 IST
 ಡಾ.ದೊಡ್ಡರಂಗೇಗೌಡ
ಡಾ.ದೊಡ್ಡರಂಗೇಗೌಡ   

ಹುಬ್ಬಳ್ಳಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಡಾ.ಎಚ್‌.ಎಚ್‌.ವೆಂಕಟೇಶಮೂರ್ತಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿರುವುದನ್ನು ಸಾಹಿತಿ ಡಾ.ದೊಡ್ಡರಂಗೇಗೌಡ ಖಂಡಿಸಿದರು.

ಸಾಹಿತಿ ಚಂದ್ರಶೇಖರ ವಸ್ತ್ರದ ಅವರ ‘ಅರಿವು ಅಕ್ಷದಾಚೆ’ ಕೃತಿಗೆ ಪ್ರಸಕ್ತ ಸಾಲಿನ ಡಾ.ಡಿ.ಎಸ್‌.ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಒಂದು ಸೀಮೆಯ ಸಾಹಿತಿ ಇನ್ನೊಂದು ಸೀಮೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬಾರದು ಎಂದು ಬೇಲಿ ಹಾಕುವುದು ಸರಿಯಲ್ಲ. ಸ್ಥಳೀಯರೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಆ ಪ್ರಾಂತ್ಯ ಅಭಿವೃದ್ಧಿಯಾಗಲ್ಲ. ಕುಬ್ಜತೆ ಪ್ರದರ್ಶಿಸುವುದು ಬೇಡ, ಸಾಹಿತ್ಯ ಅಕಳಂಕವಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.