ADVERTISEMENT

ಮೈಸೂರಿನಲ್ಲಿ ಸೆರೆ ಸಿಕ್ಕ ತ್ರಿಪುರ ಯುವಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 18:57 IST
Last Updated 24 ಫೆಬ್ರುವರಿ 2019, 18:57 IST

ಮೈಸೂರು: ದೇಶ ವಿರೋಧಿ ವಿಡಿಯೊವೊಂದನ್ನು ಫೇಸ್‌ಬುಕ್‌ಗೆ ಹಾಕಿದ ಆರೋಪದ ಮೇಲೆ ತ್ರಿಪುರ ಪೊಲೀಸರು ಶನಿವಾರ ಪ್ರಮೇಶ್ ದೇವವರ್ಮ (24) ಎಂಬ ಯುವಕನನ್ನು ಇಲ್ಲಿ ಬಂಧಿಸಿದ್ದಾರೆ.

ಈತ ಮೊಗಲ್ ದರ್ಬಾರ್ ಎಂಬ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಪುಲ್ವಾಮಾ ದಾಳಿ ನಡೆದ ಕೆಲವೇ ಹೊತ್ತಿನಲ್ಲಿ ದೇಶ ವಿರೋಧಿ ವಿಡಿಯೊವೊಂದನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದ. ಈ ಸಂಬಂಧ ತ್ರಿಪುರದ ಕ್ಯಾಂಪೋರ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.

ತ್ರಿಪುರದಲ್ಲಿ ಇದುವರೆಗೆ ದೇಶ ವಿರೋಧಿ ಭಾವನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ 15 ಯುವಕರನ್ನು ಬಂಧಿಸಲಾಗಿದೆ. 19 ಪ್ರಕರಣಗಳು ದಾಖಲಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.