ADVERTISEMENT

ಮಳೆಗೆ ಬಾಳೆತೋಟ ನಾಶ

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:39 IST
Last Updated 2 ಮೇ 2019, 19:39 IST
ಕೊಪ್ಪ ಹೋಬಳಿಯ ನಾಗನದೊಡ್ಡಿ ಗ್ರಾಮದಲ್ಲಿ ನಾಶವಾಗಿರುವ ಬಾಳೆತೋಟ
ಕೊಪ್ಪ ಹೋಬಳಿಯ ನಾಗನದೊಡ್ಡಿ ಗ್ರಾಮದಲ್ಲಿ ನಾಶವಾಗಿರುವ ಬಾಳೆತೋಟ   

ಕೊಪ್ಪ (ಮಂಡ್ಯ): ಹೋಬಳಿಯ ನಾಗದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಬಾಳೆತೋಟ ನಾಶವಾಗಿದೆ.

ಬಿ.ನಾಗರಾಜು ಎಂಬುವರಿಗೆ ಸೇರಿದ ತೋಟ ಇದಾಗಿದ್ದು, ಕಟಾವಿಗೆ ಬಂದಿದ್ದ ಬಾಳೆಗೊನೆಗಳು ನೆಲಕಚ್ಚಿವೆ. 1,000ಕ್ಕೂ ಹೆಚ್ಚು ಬಾಳೆ ಸಸಿಗಳು ಹಾಳಾಗಿವೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಏಲಕ್ಕಿ ತೋಟವೂ ನಾಶವಾಗಿದೆ.

‘ಬಾಳೆ ಬೆಳೆಯಲು ₹1 ಲಕ್ಷ ಸಾಲ ಮಾಡಿದ್ದೇನೆ. ಫಸಲು ಕೈಗೆ ಸಿಗುವ ಹೊತ್ತಿನಲ್ಲಿ ಬೆಳೆ ಹಾಳಾಗಿದೆ’ ಎಂದು ನಾಗರಾಜು ಪರಿಹಾರಕ್ಕೆ
ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.