ADVERTISEMENT

ಹೊನ್ನಾವರದಲ್ಲಿ ದಿಢೀರ್‌ ಮಳೆ!

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 6:53 IST
Last Updated 29 ಫೆಬ್ರುವರಿ 2020, 6:53 IST
   

ಕಾರವಾರ: ಹೊನ್ನಾವರ ಸುತ್ತಮುತ್ತ ಶನಿವಾರ ಬೆಳಿಗ್ಗೆ 11.20ರಿಂದ ಅರ್ಧ ಗಂಟೆ ಉತ್ತಮ ಮಳೆಯಾಯಿತು. ಅರ್ಧ ಗಂಟೆಯ ಅವಧಿಯಲ್ಲಿ ದಟ್ಟವಾದ ಮೋಡ ಕವಿದು, ಗುಡುಗು, ಸಿಡಿಲಿನ ಅಬ್ಬರವಿಲ್ಲದೇ ದಿಢೀರ್ ಆಗಿ ಮಳೆ ಶುರುವಾಯಿತು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ನೂತನ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಶಂಕುಸ್ಥಾಪನೆ ಮಾಡಲಿದ್ದಾರೆ. ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಸ್ವಲ್ಪ ಅಡಚಣೆಯಾಯಿತು.

ಬೆಳೆಗಾರರ ಆತಂಕ: ಜಿಲ್ಲೆಯಲ್ಲಿ ಈಗ ಅಡಿಕೆ ಕೊಯ್ಲು ಮಾಡಲಾಗಿದ್ದು, ಚಾಲಿ ಅಡಿಕೆಯನ್ನು ಬೆಳೆಗಾರರು ಅಂಗಳದಲ್ಲಿ ಒಣಗಿಸುತ್ತಿದ್ದಾರೆ. ಗೇರು ಬೆಳೆಯೂ ಹಲವೆಡೆ ಈಗ ಹೂ ಬಿಡುತ್ತಿದೆ. ಇದರಿಂದ ಬೆಳೆಗೆ ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.