ADVERTISEMENT

ರೈತ ಶಕ್ತಿ ಯೋಜನೆ ಶೀಘ್ರವೇ ಜಾರಿ: ಕೃಷಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 20:57 IST
Last Updated 26 ಆಗಸ್ಟ್ 2022, 20:57 IST
   

ಬೆಂಗಳೂರು: 2022–23 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಕೃಷಿ ಯಾಂತ್ರೀಕರಣದಡಿ ಡೀಸೆಲ್‌ಗೆ ಸಹಾಯಧನ ನೀಡುವ ‘ರೈತ ಶಕ್ತಿ’ ಯೋಜನೆಯನ್ನು ಸದ್ಯವೇ ಜಾರಿಗೊಳಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಈ ಯೋಜನೆಯಡಿ ರೈತರಿಗೆ ಒಂದು ಎಕರೆಗೆ ₹250 ರಂತೆ ಗರಿಷ್ಠ ಐದು ಎಕರೆಗೆ ಒಟ್ಟು ₹1,250 ಡಿಬಿಟಿ ಮೂಲಕ ಸಹಾಯಧನ ಪಾವತಿಸಲಾಗುವುದು. ಇದರಿಂದ ಕೃಷಿ ಉಪಕರಣಗಳ ಮೂಲಕ ಆಹಾರ ಧಾನ್ಯಗಳ ಉತ್ಪಾದಕತೆಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದಕ್ಕಾಗಿ ರೈತರು ನೋಂದಣಿಗಾಗಿ ಇರುವ
( FRUITS) ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಬೇಕು. ಕಿಸಾನ್‌ ತಂತ್ರಾಂಶದ ಮೂಲಕ ಹಣವನ್ನು ರೈತರ ಸೀಡೆಡ್‌ ಬ್ಯಾಂಕ್‌ ಅಥವಾ ಅಂಚೆ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗುವುದು. ಈ ಯೋಜನೆಗೆ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.