ADVERTISEMENT

ಔಷಧ ಪ್ರಯೋಗಕ್ಕೆ ದೇಹ ನೀಡಲು ಸಿದ್ಧ

ಪ್ರಧಾನಿಗೆ ಪತ್ರ ಬರೆದ ಆಟೊರಿಕ್ಷಾ ಚಾಲಕ

​ಪ್ರಜಾವಾಣಿ ವಾರ್ತೆ
Published 25 ಮೇ 2020, 12:55 IST
Last Updated 25 ಮೇ 2020, 12:55 IST
ವಿಶ್ವನಾಥ ಗೌಡ
ವಿಶ್ವನಾಥ ಗೌಡ   

ಶಿರಸಿ: ಇಲ್ಲಿನ ಆಟೊರಿಕ್ಷಾ ಚಾಲಕರೊಬ್ಬರು ತಮ್ಮ ದೇಹವನ್ನು ಕೋವಿಡ್ 19 ಔಷಧ ಪ್ರಯೋಗಕ್ಕೆ ಬಳಸಿಕೊಳ್ಳಬಹುದು ಎಂದು ಪ್ರಧಾನಮಂತ್ರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಆಟೊರಿಕ್ಷಾ ಓಡಿಸಿ ಜೀವನ ನಡೆಸುವ ವಿಶ್ವನಾಥ ಗೌಡ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, ‘ಕೊರೊನಾ ವೈರಸ್‌ ನಿಯಂತ್ರಿಸಲು ಹಲವಾರು ಔಷಧ ಪ್ರಯೋಗ ಮಾಡಲಾಗುತ್ತಿದೆ. ನನಗೆ ದೇಶದ ಮೇಲೆ ಅಭಿಮಾನವಿದೆ. ಹೀಗಾಗಿ, ಈ ಔಷಧ ಪ್ರಯೋಗವನ್ನು ನನ್ನ ದೇಹದ ಮೇಲೆ ಮಾಡಬಹುದು. ಸ್ವ ಇಚ್ಛೆಯಿಂದ ದೇಹವನ್ನು ದಾನ ಮಾಡಲು ಸಿದ್ಧನಿದ್ದೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT