ಬೆಂಗಳೂರು: ವಿವಿಧ ಸಮುದಾಯಗಳ 178 ಮಠಗಳಿಗೆ ₹ 108.24 ಕೋಟಿ, 59 ದೇವಸ್ಥಾನಗಳಿಗೆ ₹ 21.35 ಕೋಟಿ, 26 ವಿವಿಧ ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್ಗಳಿಗೆ ₹ 13 ಕೋಟಿ ಸೇರಿ ಒಟ್ಟು ₹ 142.59 ಕೋಟಿ ಅನುದಾನ ಬಿಡುಗಡೆ ಮಾಡಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.
ಈ ಪೈಕಿ, ಜೋಯಿಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ಮಠ, ದಾವಣಗೆರೆಯ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ಗೆ ತಲಾ ₹ 5 ಕೋಟಿ, ಉಡುಪಿ–ಕುಂಜಾರುಗಿರಿಯ ದುರ್ಗಾ ಬೆಟ್ಟದಲ್ಲಿರುವ ‘ಮಧ್ವವನ’ ಅಭಿವೃದ್ಧಿಗೆ, ಚಿಕ್ಕಮಗಳೂರಿನ ದೊಡ್ಡ ಕುರುಬರಹಳ್ಳಿಯಲ್ಲಿರುವ ಬಸವತತ್ವ ಪೀಠಕ್ಕೆ ತಲಾ ₹3 ಕೋಟಿ, ತಿಪಟೂರಿನ ಷಡಕ್ಷರ ಮಠ, ಹನಗವಾಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಬೆಂಗಳೂರಿನ ತಿಪ್ಪಶೆಟ್ಟಿ ಮಠ, ಹುಕ್ಕೇರಿ ತಾಲ್ಲೂಕಿನ ಹಾವೇರಿ ಮಠ, ಅಥಣಿಯ ಶಿವಯೋಗಿ ಮುರುಘೇಂದ್ರ ಮಠ, ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ತಲಾ ₹ 2 ಕೋಟಿ, ದೇವಸ್ಥಾನಗಳ ಪೈಕಿ ಬನವಾಸಿಯ ಮಧುಕೇಶ್ವರ ದೇಗುಲ ರಥ ನಿರ್ಮಾಣಕ್ಕೆ ₹ 3 ಕೋಟಿ ಒದಗಿಸಲಾಗಿದೆ.
‘ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಹೆಚ್ಚು ವರಿ ಅನುದಾನ ಒದಗಿಸಿ ಆದೇಶಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.