ADVERTISEMENT

ಬಿಜೆಪಿ ಪರ ಕೃಷ್ಣ ಪ್ರಚಾರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 19:48 IST
Last Updated 11 ಮಾರ್ಚ್ 2019, 19:48 IST
ಎಸ್‌.ಎಂ.ಕೃಷ್ಣ ಅವರಿಗೆ ಆರ್‌.ಅಶೋಕ್‌ ಹಾಗೂ ಸುರಪುರ ಶಾಸಕ ರಾಜೂ ಗೌಡ ಪುಷ್ಪಗುಚ್ಛ ನೀಡಿದರು
ಎಸ್‌.ಎಂ.ಕೃಷ್ಣ ಅವರಿಗೆ ಆರ್‌.ಅಶೋಕ್‌ ಹಾಗೂ ಸುರಪುರ ಶಾಸಕ ರಾಜೂ ಗೌಡ ಪುಷ್ಪಗುಚ್ಛ ನೀಡಿದರು   

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ‍‍ಪರ ‍ಪ್ರಚಾರ ನಡೆಸಲು ಪಕ್ಷದ ಹಿರಿಯ ನಾಯಕ
ಎಸ್‌.ಎಂ. ಕೃಷ್ಣ ಒಪ್ಪಿಗೆ ಸೂಚಿಸಿದ್ದಾರೆ.

ಬಿಜೆಪಿ ಶಾಸಕ ಆರ್. ಅಶೋಕ ಅವರು ಕೃಷ್ಣ ಅವರನ್ನು ಸೋಮವಾರ ಭೇಟಿ ಮಾಡಿ ಈ ಬಗ್ಗೆ ಸಮಾಲೋಚನೆ ನಡೆಸಿದರು.

ಒಕ್ಕಲಿಗರ ಪ್ರಾಬಲ್ಯದ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಮೂರು ಕ್ಷೇತ್ರಗಳು ಹಾಗೂ ಚಾಮರಾಜನಗರ ಕ್ಷೇತ್ರ
ಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕು ಎಂದು ಅಶೋಕ ಕೋರಿದರು. ಚುನಾವಣಾ ಪ್ರಚಾರ ಸಭೆ
ಗಳಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಇದ್ದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು ಎಂದು ವಿನಂತಿಸಿದರು.

ADVERTISEMENT

‘ಪ್ರಚಾರದ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಮಾಹಿತಿ ನೀಡಿ’ ಎಂದು ಕೃಷ್ಣ ಹೇಳಿದರು ಎಂದು ಆಪ್ತರು ಹೇಳಿದರು.

ನಮ್ಮ ಸಂಸದರು ಉತ್ತಮ ಕೆಲಸ ಮಾಡಿದ್ದಾರೆ. ಯಾರು ಸ್ಪರ್ಧಿಸುತ್ತಾರೆ ಎಂಬುದು ಮುಖ್ಯ ಅಲ್ಲ. ಸೈದ್ಧಾಂತಿಕ ನೆಲೆ ಆಧಾರದಲ್ಲಿ ತುಲನೆ ಮಾಡಿ ಮತ ಚಲಾಯಿಸುತ್ತಾರೆ
-ಎಸ್‌.ಎಂ.ಕೃಷ್ಣ, ಬಿಜೆಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.