ಮರಿಯಮ್ಮನಹಳ್ಳಿ (ಬಳ್ಳಾರಿ): ಹೊಸಪೇಟೆ ತಾಲ್ಲೂಕಿನ ತಿಮ್ಮಲಾಪುರ ಗ್ರಾಮದ ಬಳಿಯ ನಡುವಿನಕೆರೆಯ ಆವರಣದಲ್ಲಿ ಮಂಗಳವಾರ ಸಂಜೆ ಮರಳು ತುಂಬಲು ಹೋಗಿದ್ದ ಯುವಕರ ಮೇಲೆ ಮರಳು ದಿಬ್ಬ ಕುಸಿದಿದ್ದರಿಂದ, ಎರಿಸ್ವಾಮಿ(22) ಹಾಗೂ ಮೇಘರಾಜ(20) ಎಂಬುವವರು ಸಜೀವ ಸಮಾಧಿಯಾಗಿದ್ದಾರೆ.
ಮೂವರು ಯುವಕರು ಕೆರೆ ಬಳಿ ಸಂಜೆ ಟ್ರಾಕ್ಟರ್ಗೆ ಮರಳು ತುಂಬಲು ಹೋಗಿದ್ದರು. ಮರಳು ತುಂಬಿಸಿ ಕಳುಹಿಸಿ, ಮತ್ತೆ ಮರಳು ತೆಗೆಯುವಾಗ ಘಟನೆ ನಡೆದಿದೆ. ಇದನ್ನು ಕಂಡ ಮತ್ತೊಬ್ಬ ಯುವಕ ಗಾಬರಿಗೊಂಡು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.