ADVERTISEMENT

ಐವರಿಗೆ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 20:01 IST
Last Updated 25 ಜೂನ್ 2019, 20:01 IST

ಬೆಂಗಳೂರು: 2018ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿಗೆ ಐವರನ್ನು ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ 9 ಮಂದಿಯ ಶಿಲ್ಪಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ.

ದ್ಯಾಮಣ್ಣ ಕಾಳಪ್ಪ ಬಡಿಗೇರ (ಸಂಪ್ರದಾಯ ಶಿಲ್ಪ, ಬಾಗಲಕೊಟೆ ಜಿಲ್ಲೆ),ಅಶೋಕ ಗುಡಿಗಾರ್ (ಸಂಪ್ರದಾಯ ಶಿಲ್ಪ, ರಾಮನಗರ ಜಿಲ್ಲೆ),ಡಾ.ಶಿವಾನಂದ ಎಚ್.ಬಂಟನೂರು (ಸಮಕಾಲೀನ ಶಿಲ್ಪ, ವಿಜಯಪುರ ಜಿಲ್ಲೆ),ಜಯರಾಂ.ಬಿ.ಎನ್. (ಸಿಮೆಂಟ್‍ ಶಿಲ್ಪ, ಶಿವಮೊಗ್ಗ ಜಿಲ್ಲೆ),ರತ್ನ ಟಿ.ಎನ್. (ಸಂಪ್ರದಾಯ ಶಿಲ್ಪ, ಉಡುಪಿ ಜಿಲ್ಲೆ) ಗೌರವ ಪ್ರಶಸ್ತಿ ಪುರಸ್ಕೃತರು.

ಪ್ರಶಸ್ತಿ ತಲಾ ₹ 50 ಸಾವಿರ ನಗದು ಒಳಗೊಂಡಿದೆ. ಜುಲೈ ಕೊನೆಯ ವಾರದಲ್ಲಿ ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಶಿಲ್ಪಕಲಾಕೃತಿಗಳ ಪ್ರದರ್ಶನ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಶಿಲ್ಪಿ ರು.ಕಾಳಾಚಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.