ADVERTISEMENT

ಮಂಗಳೂರು ಗಲಭೆ ಹೊಣೆಯನ್ನು ಕಾಂಗ್ರೆಸ್ ಹೊತ್ತುಕೊಳ್ಳಬೇಕು: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 9:07 IST
Last Updated 21 ಡಿಸೆಂಬರ್ 2019, 9:07 IST
   

ಮಂಗಳೂರು: ಇಲ್ಲಿ ಗುರುವಾರ ನಡೆದ ಗಲಭೆಯ ಹೊಣೆಯನ್ನು ಕಾಂಗ್ರೆಸ್ ಹೊರಬೇಕು. ಯುಟಿ ಖಾದರ್ ಹೇಳಿಕೆ ನೀಡಿ 24 ಗಂಟೆಯೊಳಗೆ ಈ ಗಲಾಟೆಯಾಗಿದೆ,ಈ ಕುರಿತು ತನಿಖೆಯಾಗಬೇಕು ಎಂದು ಸಂಸದೆಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇರಳದಿಂದ ಬಂದು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸುವುದನ್ನು ಕಾಶ್ಮೀರದಲ್ಲಿ ನೋಡುತ್ತಿದ್ದೆವು. ಆದರೆ, ಈಗ ಇಲ್ಲಿ ನೋಡುತ್ತಿದ್ದೇವೆ ಎಂದರು.

ಇದಕ್ಕೆಲ್ಲಾ ಕುಮ್ಮುಕ್ಕು ನೀಡುತ್ತಿರುವ ಪಿಎಫ್‌‌ಐ ಮೇಲೆ ನಿಷೇಧ ಹೇರಬೇಕು. ಈ ಸಂಬಂಧ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.