ADVERTISEMENT

ಕೊಪ್ಪಳ: ಮರುಳಸಿದ್ಧೇಶ್ವರದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ವಿವಾಹ; ಪೀಠತ್ಯಾಗ

ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಧ್ಯಪ್ರವೇಶಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 10:59 IST
Last Updated 1 ಜನವರಿ 2019, 10:59 IST
   

ಕೊಪ್ಪಳ: ಉಜ್ಜಯಿನಿ ಶಾಖಾ ಮಠವಾಗಿರುವತಾಲ್ಲೂಕಿನ ಅಳವಂಡಿ ಮರುಳಸಿದ್ಧೇಶ್ವರ ಮಠದಪೀಠಾಧಿಪತಿಸಿದ್ಧಲಿಂಗ ಸ್ವಾಮೀಜಿ ಪೀಠತ್ಯಾಗ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ವಾಮೀಜಿ ವಿವಾಹವಾಗಿರುವ ಕಾರಣಪೀಠತ್ಯಾಗ ಮಾಡಿದ್ದಾರೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ಈ ಕುರಿತು ಗ್ರಾಮದ ಮುಖಂಡ ಸುರೇಶ ದಾಸರಡ್ಡಿ ಪ್ರಕಟಣೆ ನೀಡಿ, ಸಿದ್ಧಲಿಂಗಸ್ವಾಮಿ ಮರುಳಸಿದ್ದೇಶ್ವರ ಮಠದ ಪೀಠತ್ಯಾಗ ಮಾಡಿ ವಿವಾಹವಾಗಿರುವ ಬಗ್ಗೆ ಖಚಿತವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಉಜ್ಜಯಿನಿ ಪೀಠದ ಶಾಖಾ ಮಠವಾಗಿರುವುದರಿಂದ ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಧ್ಯಪ್ರವೇಶಿಸಬೇಕುಎಂದುಅವರು ಆಗ್ರಹಿಸಿದ್ದಾರೆ.

ADVERTISEMENT

ಶ್ರೀಗಳು ಪೀಠತ್ಯಾಗ ದುರಾದೃಷ್ಟಕರ ಮಠದ ಅಭಿವೃದ್ಧಿಗೆ ಸಹಕಾರ ಸಿಗಲಿಲ್ಲಎಂಬುವುದು ಸುಳ್ಳು. ಮಠದಲ್ಲಿರುವ ಶ್ರೀಗಳಕುಟುಂಬದವರ ಆಸ್ತಿ ಜಗಳ, ಪಟ್ಟಭದ್ರ ಹಿತಾಸಕ್ತಿತನದ ಸ್ವಭಾವ ಮತ್ತು ಜಗಳದಿಂದ ಮಠದ ಅಭಿವೃದ್ಧಿ, ಧಾರ್ಮಿಕ ಚಟುವಟಿಕೆಗಳು ಕಳೆದ 25 ವರ್ಷಗಳಿಂದ ನಿಂತುಹೋಗಿವೆ. ಮಠದಲ್ಲಿರುವ ಕಟ್ಟಿಮನಿ ಹಿರೇಮಠ ಇನಾಮದಾರ ವಂಶಸ್ಥರು ತಮ್ಮ ಹಿತಾಸಕ್ತಿಗಾಗಿ, ಅಸ್ತಿತ್ವಕ್ಕಾಗಿ ಮಠದಲ್ಲಿ ಇದ್ದರೆ ವಿನಾ ಗ್ರಾಮದ ಭಕ್ತರ ಒಳಿತಿಗಾಗಿ ಅಲ್ಲ ಎಂದು ಅವರು ತಿಳಿಸಿದ್ದಾರೆ.

ಶ್ರೀಗಳು ಪೀಠ ತ್ಯಾಗ ಮಾಡುವಾಗ ಯಾರ ಗಮನಕ್ಕೂ ತಾರದೇಭಕ್ತರಲ್ಲಿ ತಮಗಾಗುವ ತೊಂದರೆಗಳ ಬಗ್ಗೆ ಚರ್ಚಿಸಿಲ್ಲ. ಏಕಾಏಕಿ ಪೀಠ ತ್ಯಾಗ ಮಾಡಿರುವುದು ಮತ್ತು ವಿವಾಹವಾಗಿರುವುದು ಮಠದ ಭಕ್ತರಿಗೆ ಮಾಡಿದ ಅಪಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ಉಜ್ಜಯಿನಿ ಶ್ರೀಗಳು ಮಧ್ಯೆ ಪ್ರವೇಶಿಸಿ, ಸಮಗ್ರ ವಿವರ ಪಡೆದು ಸದ್ಯ ಅಳವಂಡಿಯಲ್ಲಿ ವಾಸವಿರುವ ಕಟ್ಟಿಮನಿ ಇನಾಮದಾರ ವಂಶಸ್ಥರನ್ನು ಹೊರತುಪಡಿಸಿ, ಉನ್ನತ ವ್ಯಾಸಂಗ ಮಾಡಿದ ಉತ್ತಮ ವಾಗ್ಮಿ ತಮ್ಮ ಶಿಷ್ಯರೊಬ್ಬರನ್ನು ನಮ್ಮ ಮಠಕ್ಕೆ ಸ್ವಾಮಿಗಳನ್ನಾಗಿ ಪಟ್ಟಕ್ಕೆ ತರಬೇಕು ಎಂಬುವುದು ಗ್ರಾಮದ ಜನರ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.