ADVERTISEMENT

ಸಿದ್ದಾಪುರ: ಕಾಡಾನೆಯಿಂದ ಪಾರಾದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 13:21 IST
Last Updated 30 ಏಪ್ರಿಲ್ 2023, 13:21 IST
ಕೊಡಗು ಜಿಲ್ಲೆಯ ಸಿದ್ದಾಪುರದ ಮೈಸೂರು ರಸ್ತೆಯ ಮೈದಾನದಲ್ಲಿ ಶನಿವಾರ ಮಕ್ಕಳು ಆಟವಾಡುತ್ತಿದ್ದ ವೇಳೆ ಕಾಡಾನೆಯೊಂದು ಮೈದಾನದ ಬಳಿಗೆ ಬಂದಿತ್ತು
ಕೊಡಗು ಜಿಲ್ಲೆಯ ಸಿದ್ದಾಪುರದ ಮೈಸೂರು ರಸ್ತೆಯ ಮೈದಾನದಲ್ಲಿ ಶನಿವಾರ ಮಕ್ಕಳು ಆಟವಾಡುತ್ತಿದ್ದ ವೇಳೆ ಕಾಡಾನೆಯೊಂದು ಮೈದಾನದ ಬಳಿಗೆ ಬಂದಿತ್ತು   

ಸಿದ್ದಾಪುರ (ಕೊಡಗು): ಇಲ್ಲಿನ ಮೈಸೂರು ರಸ್ತೆಯ ಬಡಾವಣೆಯಲ್ಲಿ ಶನಿವಾರ ಮಕ್ಕಳು ಆಟವಾಡುತ್ತಿದ್ದ ವೇಳೆ ಕಾಡಾನೆಯೊಂದು ಮೈದಾನದ ಬಳಿಗೆ ಬಂದಿದ್ದು, ಸ್ವಲ್ಪೇ ಅಂತರದಲ್ಲಿ ಮಕ್ಕಳು ಪಾರಾಗಿದ್ದಾರೆ.

ಸ್ಥಳೀಯ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾಗ ಕಾಫಿ ತೋಟದಿಂದ ಬಡಾವಣೆಯತ್ತ ಕಾಡಾನೆ ಬಂದಿದೆ. ಈ ವೇಳೆ ಮಕ್ಕಳು ಕಿರುಚಿಕೊಂಡಿದ್ದಾರೆ. ನಂತರ, ಆನೆ ಮರಳಿ ತೋಟಕ್ಕೆ ವಾಪಸ್ ಹೋಗಿದೆ.

ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಜನವಸತಿ ಪ್ರದೇಶಕ್ಕೆ ಕಾಡಾನೆ ಹಿಂಡುಗಳು ಬರುತ್ತಿವೆ. ಇದರಿಂದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ದಿನ ದೂಡುವಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.