ADVERTISEMENT

ಮಂತ್ರಿಯಾದರೂ ಅವರೆಲ್ಲ ಅನರ್ಹರೇ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 12:19 IST
Last Updated 6 ಫೆಬ್ರುವರಿ 2020, 12:19 IST
   

ಮೈಸೂರು: ‘ಪಕ್ಷ ದ್ರೋಹಿಗಳು ಯಾವುದೇ ಸರ್ಕಾರದಲ್ಲಿ ಮಂತ್ರಿಯಾದರೂ ಅನರ್ಹರೇ. ಅವರು ಗೆದ್ದು ಬಂದಿರಬಹುದು, ಆದರೆ, ‍ಪಕ್ಷಾಂತರ ಮಾಡಿದ ಕಳಂಕ ಸದಾ ಇರುತ್ತದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಟೀಕಿಸಿದರು.

‘ಯಡಿಯೂರಪ್ಪ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ. ಅವರಿಗೆ ಪಕ್ಷದ ಹೈಕಮಾಂಡ್‌ ಯಾವುದೇ ಸ್ವಾತಂತ್ರ್ಯ ನೀಡುತ್ತಿಲ್ಲ’ ಎಂದರು.

‘10 ಮಂದಿ ಮಂತ್ರಿ ಆಗಿರುವುದು ನನಗಂತೂ ಖುಷಿ ನೀಡಿಲ್ಲ. ಆದರೂ, ಶುಭಾಶಯ ಕೋರುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲಿ’ ಎಂದು ಆಶಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.