ADVERTISEMENT

ಹೆಬ್ಬೆರಳು ಕೊಯ್ದು ದೇವಿಗೆ ರಕ್ತದ ತಿಲಕ ಇಟ್ಟ ಶ್ರೀರಾಮ ಸೇನೆ ಕಾರ್ಯಕರ್ತ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 17:26 IST
Last Updated 22 ಅಕ್ಟೋಬರ್ 2023, 17:26 IST
   

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಭಾನುವಾರ ನಡೆದ ದುರ್ಗಾಮಾತಾ ದೌಡ್‌ನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತ ತಲವಾರಿನಿಂದ ತನ್ನ ಹೆಬ್ಬೆರಳು ಕೊಯ್ದುಕೊಂಡು ದುರ್ಗಾದೇವಿಗೆ ತಿಲಕ ಇಟ್ಟ ವಿಡಿಯೊ ತುಣುಕು ಸಾಮಾಜಿಕ ಕಾಲತಾಣಗಳಲ್ಲಿ ಹರಿದಾಡಿದೆ.

ಗ್ರಾಮದ ಕಾಡಸಿದ್ದೇಶ್ವರ ದೇವಸ್ಥಾನದ ಬಳಿ ದುರ್ಗಾದೇವಿ ಮೂರ್ತಿ‍ ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ದುರ್ಗಾಮಾತಾ ದೌಡ್‌ ನಡೆಯುತ್ತಿದೆ. ಭಾನುವಾರ ದೌಡ್‌ ಆರಂಭಕ್ಕೂ ಮುನ್ನ ಕಾರ್ಯಕರ್ತ ತಲವಾರಿನಿಂದ ಬಲಗೈ ಹೆಬ್ಬರಳು ಕೊಯ್ದು ರಕ್ತದ ತಿಲಕವನ್ನು ದೇವಿ ಹಣೆಗೆ ಹಚ್ಚಿದ್ದಾರೆ.

ಅಲ್ಲದೇ, ಪಾಕಿಸ್ತಾನ ಧ್ವಜ ಹೋಲುವ ರಂಗೋಲಿಯನ್ನು ರಸ್ತೆಯಲ್ಲಿ ಬಿಡಿಸಿ, ದೌಡ್‌ನ ಎಲ್ಲ ಕಾರ್ಯಕರ್ತರು ಅದನ್ನು ತುಳಿದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.