ADVERTISEMENT

ಕಲ್ಲು ತೂರಾಟ:ನಾಲ್ವರಿಗೆ ಗಾಯ

ದೇಗುಲ ಉತ್ಸವ–ಬ್ಯಾನರ್‌ ಕಟ್ಟುವ ವಿಚಾರ: ಕುಂಜತ್ತೂರಿನಲ್ಲಿ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 20:00 IST
Last Updated 15 ಡಿಸೆಂಬರ್ 2018, 20:00 IST

ಕಾಸರಗೋಡು: ಕರ್ನಾಟಕ ಗಡಿ ಸಮೀಪದ ಕುಂಜತ್ತೂರಿನಲ್ಲಿ ಶುಕ್ರವಾರ ರಾತ್ರಿ ಮಂಜೇಶ್ವರ ದೇವಾಲಯದ ಉತ್ಸವದ ಅಂಗವಾಗಿ ಬ್ಯಾನರ್‌ ಕಟ್ಟುವ ವಿಚಾರದಲ್ಲಿ ಘರ್ಷಣೆ ಉಂಟಾಗಿ ನಾಲ್ವರು ಗಾಯಗೊಂಡಿದ್ದಾರೆ. ಕಲ್ಲು ತೂರಾಟದಿಂದ ಹಲವು ವಾಹನಗಳು ಜಖಂಗೊಂಡಿವೆ.

ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಷೆಲ್‌ ಸಿಡಿಸಿದರು.

ಕುಂಜತ್ತೂರಿನಲ್ಲಿ ಬ್ಯಾನರ್ ಕಟ್ಟುತ್ತಿದ್ದ ವೇಳೆ ಇನ್ನೊಂದು ಗುಂಪು ಪ್ರತಿಭಟಿಸಿದ್ದು ಘರ್ಷಣೆಗೆ ಮೂಲ ಎನ್ನಲಾಗಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ನಿಲುಗಡೆ ಆಗಿತ್ತು.ಘಟನೆ ಸಂಬಂಧಿಸಿದಂತೆ ಕಿರಣ್, ಪೆರಿಂಗಡಿಯ ಅಹಮ್ಮದ್ ಶುಹೈಬ್ ಮತ್ತು ಇಬ್ಬರು ಬಾಲಕರನ್ನು ಬಂಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.