ADVERTISEMENT

ಸ್ವದೇಶ್‌ ದರ್ಶನಕ್ಕೆ ಹುತ್ರಿದುರ್ಗ ಕೋಟೆ: ದೇವೇಗೌಡ ನೇತೃತ್ವದ ಸಂಸದರ ಮನವಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 14:43 IST
Last Updated 24 ಜುಲೈ 2025, 14:43 IST
H D DEVEGOWDA
H D DEVEGOWDA   

ನವದೆಹಲಿ: ಸ್ವದೇಶ್‌ ದರ್ಶನ್‌ 2.0 ಯೋಜನೆಯಡಿ ಕುಣಿಗಲ್‌ನ ಹುತ್ರಿ ದುರ್ಗ ಕೋಟೆಯನ್ನು ಪರಿಗಣಿಸಬೇಕು ಎಂದು ಜೆಡಿಎಸ್‌ ಸಂಸದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ಸಂಸದರಾದ ಡಾ.ಸಿ.ಎನ್‌.ಮಂಜುನಾಥ್‌ ಹಾಗೂ ಮಲ್ಲೇಶ್‌ ಬಾಬು ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಅವರನ್ನು ಗುರುವಾರ ಇಲ್ಲಿ ಭೇಟಿ ಮಾಡಿ ಈ ಮನವಿ ಮಾಡಿದ್ದಾರೆ. ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.