ADVERTISEMENT

ಮುನಿರತ್ನ ಮಾತಿಗೆ ಸ್ವಾಮೀಜಿ ಧ್ವನಿ ಎತ್ತಲಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:46 IST
Last Updated 17 ಸೆಪ್ಟೆಂಬರ್ 2024, 15:46 IST
 ಡಿ.ಕೆ. ಶಿವಕುಮಾರ್  
 ಡಿ.ಕೆ. ಶಿವಕುಮಾರ್     

ಬೆಂಗಳೂರು: ಒಕ್ಕಲಿಗ ಸಮುದಾಯದ ಕುರಿತು ಬಿಜೆಪಿ ಶಾಸಕ ಮುನಿರತ್ನ ಆಡಿರುವ ಮಾತಿನ ಬಗ್ಗೆ ಸಮುದಾಯದ ಮುಖ್ಯಸ್ಥರು, ಸ್ವಾಮೀಜಿಗಳು, ಹಿರಿಯರು ಧ್ವನಿ ಎತ್ತಬೇಕು. ಬಿಜೆಪಿ ನಾಯಕರೂ ಖಂಡಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಬಿಜೆಪಿಯಲ್ಲಿರುವ ಒಕ್ಕಲಿಗ ನಾಯಕರು, ಜನಪ್ರತಿನಿಧಿಗಳು ಪ್ರತಿಕ್ರಿಯಿಸಬೇಕು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ರಾಜಕೀಯ ಬಿಟ್ಟು ಇಂತಹ ಘಟನೆಗಳನ್ನು ಖಂಡಿಸಬೇಕು. ಮುನಿರತ್ನ ಮಾತು ತಪ್ಪೋ, ಸರಿಯೋ ಎಂದು ಸಮುದಾಯಕ್ಕೆ ಹೇಳಬೇಕು’ ಎಂದರು.

‘ಪ್ರಕರಣದ ಹಿಂದೆ ಅಣ್ಣ–ತಮ್ಮ ಇದ್ದಾರೆ’ ಎಂಬ ಆರೋಪದ ಕುರಿತು ನನಗೆ ಮಾಹಿತಿ ಇಲ್ಲ.  ಬಿಜೆಪಿ–ಜೆಡಿಎಸ್‌ನ ಕೇಂದ್ರ ಸಚಿವರು, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮೊದಲಾದ ದೊಡ್ಡ ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.