ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
‘ಪ್ರಜಾವಾಣಿ’ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪಠ್ಯ ಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಬಿಜೆಪಿಯ ಸುಳ್ಳುಗಳು ಬಯಲಾಗಿವೆ’ ಎಂದು ಟೀಕಿಸಿದೆ.
‘ಈಗಾಗಲೇ ಕೈಬಿಡಲಾಗಿದ್ದ ಪಠ್ಯಗಳು, ಬಿಜೆಪಿಯ ಸುಳ್ಳುಗಳು, ಅವರ ಅಜೆ೦ಡಾಗಳು, ಸೇರ್ಪಡೆ ಮಾಡಿದ ಪಠ್ಯ ಮತ್ತು ಅದರ ಉದ್ದೇಶಗಳು, ಇವುಗಳಿಂದ ಮಕ್ಕಳ ಕಲಿಕೆಯ ಮೇಲಾಗುವ ಪರಿಣಾಮಗಳ ಬಗ್ಗೆ ಶಿಕ್ಷಣ ತಜ್ಞರ ಅಭಿಪ್ರಾಯಗಳು ಹೀಗಿವೆ. ಜನ ಜಾಗೃತರಾಗಿರಬೇಕು’ ಎಂದೂ ಕಾಂಗ್ರೆಸ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.