ADVERTISEMENT

ರಂಗಭೂಮಿ ಕಲಾವಿದ ಅನಿಲ ಠಕ್ಕರ್‌ ನಿಧನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 20:00 IST
Last Updated 4 ಏಪ್ರಿಲ್ 2020, 20:00 IST
ಅನಿಲ ಠಕ್ಕರ್
ಅನಿಲ ಠಕ್ಕರ್   

ಹುಬ್ಬಳ್ಳಿ: ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯರಾಗಿದ್ದರಂಗಭೂಮಿ ಕಲಾವಿದ ಅನಿಲ ಠಕ್ಕರ್ (85) ಶನಿವಾರ ಧಾರವಾಡದಲ್ಲಿ ನಿಧನರಾದರು. ಸಂಜೆ ಅಂತ್ಯಕ್ರಿಯೆ ಜರುಗಿತು.

ಅವರು ಜಿಲ್ಲೆಯ ರಂಗಭೂಮಿ ಕ್ಷೇತ್ರಕ್ಕೆ ಆಧುನಿಕ ರಂಗಭೂಮಿಯನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಟ, ನಿರ್ದೇಶಕ, ನಾಟಕಕಾರರಾಗಿದ್ದರು. ಜೊತೆಗೆ ಕುಂಚ ಕಲಾವಿದರಾಗಿ, ಕವಿಯಾಗಿ, ಸಾಹಿತಿಯಾಗಿ, ಚಲನಚಿತ್ರ ನಟರಾಗಿ ಹೆಸರು ಮಾಡಿದ್ದರು.

ಉರ್ದು ಭಾಷೆಯಲ್ಲಿ ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಪಾಕಿಸ್ತಾನದಲ್ಲಿಯೂ ಕತೆಗಳು ಪ್ರಕಟವಾಗಿವೆ. ಮೃತರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.