ADVERTISEMENT

ಮೇಲುಕೋಟೆ: ದರ್ಶನದ ವೇಳೆ ಕಳ್ಳತನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 19:10 IST
Last Updated 2 ಡಿಸೆಂಬರ್ 2018, 19:10 IST

ಮೇಲುಕೋಟೆ: ಇಲ್ಲಿನ ಚೆಲುವ ನಾರಾಯಣ ಸ್ವಾಮಿ ದೇಗುಲದಲ್ಲಿ ಭಾನುವಾರ ದೇವರ ದರ್ಶನ ಮಾಡುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ₹1 ಲಕ್ಷ ಕಳ್ಳತನವಾಗಿದೆ.

ಬೆಂಗಳೂರಿನ ಮಾಲಿನಿ ಎಂಬುವರು ದೇವರ ದರ್ಶನಕ್ಕಾಗಿ ಕುಟುಂಬ ಸಮೇತ ಬಂದಿದ್ದರು. ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಮಹಿಳೆಯರ ಗುಂಪೊಂದು ಭಕ್ತರ ಸೋಗಿನಲ್ಲಿ ಬಂದು ಬ್ಯಾಗಿನಲ್ಲಿದ್ದ ₹1ಲಕ್ಷ ಹಾಗೂ 500 ಅಮೆರಿಕ ಡಾಲರ್‌ ಕಳ್ಳತನ ಮಾಡಿದ್ದಾರೆ.

ಮಂಗಳಾರತಿ ತಟ್ಟೆಗೆ ಹಣ ಹಾಕಲು ಬ್ಯಾಗ್‌ ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಅನುಮಾನಗೊಂಡು ಮೂವರು ಮಹಿಳೆಯರನ್ನು ಭಕ್ತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಣ ದೋಚಿದ ಮಹಿಳೆಯರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.