ಮಂಗಳೂರು: ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಹಿರಿಯ ವಿಕಿರಣ ಜೀವಶಾಸ್ತ್ರಜ್ಞ ಡಾ.ಮಂಜೇಶ್ವರ ಶ್ರೀನಾಥ್ ಬಾಳಿಗ ಅವರು ಆಂಕಾಲಜಿ ಹಾಗೂ ಕಾರ್ಸಿನೋಜೆನೆಸಿಸ್ ಕ್ಷೇತ್ರದಲ್ಲಿ, ವಿಶ್ವಮಟ್ಟದ ಶೇ 2 ಉನ್ನತ ಶ್ರೇಣಿಯೊಳಗಿನ ವಿಜ್ಞಾನಿಗಳಲ್ಲಿ ಒಬ್ಬರು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಮೆರಿಕ ಸಾನ್ಫೋರ್ಡ್ ವಿಶ್ವವಿದ್ಯಾಲಯವು ಆಂಕಾಲಜಿ ಹಾಗೂ ಕಾರ್ನಿನೋಜೆನಿಸಿಸ್ ವಿಷಯದಲ್ಲಿ ನಡೆಸಿದ್ದ ಅಧ್ಯಯನದಲ್ಲಿ ಡಾ.ಬಾಳಿಗ ಅವರು ವಿಶ್ವಮಟ್ಟದ ಶೇ 3.58 ಅಂಕಗಳಲ್ಲಿ ಶೇ 1.38 ಅಂಕಗಳಿಸಿ ಈ ಮಾನ್ಯತೆಗೆ ಪಾತ್ರರಾಗಿದ್ದಾರೆ. ಈ ಗೌರವ ಪಡೆದ ಭಾರತದ ಏಳನೆಯವರು, ಕರ್ನಾಟಕದಲ್ಲಿ ಮೊದಲಿಗರು ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.