ಬೆಂಗಳೂರು: ‘ವರ್ಗಾವಣೆ ದಂಧೆಯೇ ಭ್ರಷ್ಟಾಚಾರಕ್ಕೆ ಮೂಲ. ಇದನ್ನು ಮಟ್ಟ ಹಾಕಲು ಜನಪ್ರತಿನಿಧಿಗಳ ಸಹಕಾರ ಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿಧಾನಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಲಂಚದಿಂದಾಗಿ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಜನಪ್ರತಿನಿಧಿಗಳಿಂದ ಮಾತ್ರ ಇದನ್ನು ಕೊನೆಗಾಣಿಸಲು ಸಾಧ್ಯ’ ಎಂದರು.
‘ಕೊಲೆ, ಸುಲಿಗೆ, ಅತ್ಯಾಚಾರ ಮುಂತಾದ ಘಟನೆಗಳಿಂದ ಮುಕ್ತಿ ಯಾವಾಗ? ಟಿ.ವಿಯಲ್ಲಿ ಬರುವ ವಿದ್ಯಮಾನ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ’ ಎಂದು ಹೇಳಿದರು.
ಪ್ರಾಮಾಣಿಕ ಮಾತು: ‘ವರ್ಗಾವಣೆ ದಂಧೆಯಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬುದಾಗಿ ಮುಖ್ಯಮಂತ್ರಿಯವರು ಪ್ರಾಮಾಣಿಕ ಮಾತುಗಳನ್ನು ಆಡಿದ್ದಾರೆ. ಐಎಎಸ್, ಕೆಎಎಸ್ ಮತ್ತಿತರ ಅಧಿಕಾರಿಗಳು ಬೆಂಗಳೂರಿನಲ್ಲಿ ಪೋಸ್ಟಿಂಗ್ ಪಡೆಯಲು ₹8 ಕೋಟಿಯಿಂದ ₹10 ಕೋಟಿವರೆಗೆ ಹಣ ನೀಡುತ್ತಿದ್ದಾರೆ. ಈಗ ಈಟ್ ಇಂಡಿಯಾ ಕಂಪನಿಗಳು ದೋಚುತ್ತಿವೆ’ ಎಂದು ಜೆಡಿಎಸ್ನ ಎ.ಟಿ.ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.