ADVERTISEMENT

ಪತ್ರಕರ್ತೆಯರ ಸಂಘಕ್ಕೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 22:40 IST
Last Updated 22 ಜನವರಿ 2023, 22:40 IST

ಬೆಂಗಳೂರು: ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರಾಗಿ ಪದ್ಮಾ ಶಿವಮೊಗ್ಗ ಸೇರಿ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಜೆ.ಎನ್.‌ವಾಣಿಶ್ರೀ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುಶ್ರೀ ಎಂ. ಕಡಕೋಳ, ಸಹ ಕಾರ್ಯದರ್ಶಿಯಾಗಿ ಪಂಕಜಾ ಗೊರೂರು, ಖಜಾಂಚಿಯಾಗಿ ಹಲಿಮತ್ ಸಾದಿಯಾ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚೇತನಾ ಬೆಳಗೆರೆ, ಶೀಲಾ ಸಿ. ಶೆಟ್ಟಿ, ಮಿನಿ ತೇಜಸ್ವಿ, ಕೀರ್ತಿ ಶೇಖರ್, ಶ್ರೀಜಾ ವಿ.ಎನ್., ಶಾಂತಾ ತಮ್ಮಯ್ಯ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಪತ್ರಕರ್ತೆ ಎಂ.ಪಿ. ಸುಶೀಲಾ ಕಾರ್ಯನಿರ್ವಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.