ADVERTISEMENT

ವಿಜಯಪುರ | ಮಳೆಗೆ ‘ಡೋಣಿ’ ಸೇತುವೆ ಜಲಾವೃತ, ಹಲವು ಗ್ರಾಮದ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 6:27 IST
Last Updated 25 ಜೂನ್ 2019, 6:27 IST
   

ವಿಜಯಪುರ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಮಳೆಗೆ ತಾಳಿಕೋಟೆ ಬಳಿಯ ಡೋಣಿ ನದಿ ತುಂಬಿ ಹರಿಯುತ್ತಿದ್ದು, ಸೇತುವೆ, ರಸ್ತೆಗಳು ಜಲಾವೃತವಾಗಿವೆ.

ಇದರಿಂದಾಗಿ ಹಡಗಿನಾಳ, ಹರನಾಳ, ಮುಕಿಹಾಳ, ಕಲ್ಲದೇವನಹಳ್ಳಿ, ನಾಗೂರ, ಶಿವಪುರ ಹಾಗೂ ಹಗರಗುಂಡ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು,ಪರ್ಯಾಯ ಮಾರ್ಗ ಬಳಸಿ 10 ಕಿ.ಮೀ ದೂರ ಕ್ರಮಿಸಬೇಕಾಗಿದೆ. ತಾಳಿಕೋಟೆ ಬಳಿ ಡೋಣಿ ನದಿಗೆ ಹೊಸ ಸೇತುವೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT