ADVERTISEMENT

ಮರಳಿನಲ್ಲಿ ಅರಳಿದ ವಿಷ್ಣುವರ್ಧನ್!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 19:00 IST
Last Updated 16 ಸೆಪ್ಟೆಂಬರ್ 2021, 19:00 IST
ವಿಷ್ಣುವರ್ಧನ್‌ ಮರಳು ಶಿಲ್ಪ
ವಿಷ್ಣುವರ್ಧನ್‌ ಮರಳು ಶಿಲ್ಪ   

ಬೆಂಗಳೂರು:ಮರಳು ಶಿಲ್ಪ ಕಲೆಯ ತವರೂರು ಎಂದೇ ಖ್ಯಾತಿ ಪಡೆದಿರುವ ಒಡಿಶಾದ ಪುರಿಯ ಮೆರೀನ್ ಡ್ರೈವ್ ಬೀಚ್‌ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.

ಇದೇ 18ರಂದು ಕನ್ನಡದ ಮೇರುನಟ ದಿವಂಗತ ವಿಷ್ಣುವರ್ಧನ್‌ ಅವರ 71ನೇ ಜನ್ಮದಿನ. ಇದೇ ಸಂದರ್ಭದಲ್ಲಿ ಹೆಸರಾಂತ ಮರಳು ಶಿಲ್ಪಿ ಮನೀಶ್ ಕುಮಾರ್ ಅವರು ವಿಷ್ಣುವರ್ಧನ್‌ ಅವರ ಮರಳು ಶಿಲ್ಪವನ್ನು ರಚಿಸಿದ್ದಾರೆ. ‘ಜೈ ಕನ್ನಡ. ಭಾರತೀಯ ಸಿನಿಮಾದ ಹೆಮ್ಮೆ ಡಾ.ವಿಷ್ಣುವರ್ಧನ್‌’ ಎನ್ನುವ ಅಡಿಬರಹದೊಂದಿಗೆವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ. ಇದಕ್ಕೆ ಅಗತ್ಯ ಹಣಕಾಸು ನೆರವನ್ನು ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT