ವಿಟ್ಲ: ಪುಣಚ ಗ್ರಾಮದ ಮನೆಲ ಚರ್ಚ್ಗೆ ಸೇರಿರುವ ಗ್ರೊಟ್ಟೊಗೆ ಶನಿವಾರ ಬೆಳಿಗ್ಗೆ ಕಿಡಿಗೇಡಿಗಳು ಕಲ್ಲು ಎಸೆದು ಹಾನಿ ಮಾಡಿದ್ದಾರೆ.
ಪುಣಚ - ತೋರಣಕಟ್ಟೆ ರಸ್ತೆಯ ಮನೆಲ ಕ್ರಿಸ್ತರಾಜ ಚರ್ಚ್ಗೆ ಸೇರಿದ ಗ್ರೊಟ್ಟೊ ಇದಾಗಿದ್ದು, ಹಾನಿಯಾಗಿರುವುದು ಬೆಳಿಗ್ಗೆ ಗೊತ್ತಾಗಿದೆ.‘ಕಲ್ಲು ಎಸೆತದಿಂದ ಗ್ರೊಟ್ಟೊದ ಗಾಜು ಪುಡಿಯಾಗಿದ್ದು, ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಚರ್ಚ್ನ ಧರ್ಮಗುರು ಪ್ರಕಾಶ್ ಡಿಸೋಜ ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ವಿಟ್ಲ ಪಿಎಸ್ಐ ಯಲ್ಲಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳ ಪೊಲೀಸ್ ಇನ್ಸ್ಪೆಕ್ಟರ್ ಶರಣ ಗೌಡ, ವಿಟ್ಲ ಎಸ್ಐ ಯಲ್ಲಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಎಸ್ಪಿ ಟಿ.ಎಂ. ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.