ADVERTISEMENT

ವಾಟೆಖಾನ್‌ ಎಸ್ಟೇಟ್‌ ಬ್ಯಾಂಕ್‌ ಸುಪರ್ದಿಗೆ

ಕಾಫಿ ಎಸ್ಟೇಟ್‌ ಮಾಲೀಕರಿಂದ ₹ 21 ಕೋಟಿ ಸಾಲ ಬಾಕಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 16:28 IST
Last Updated 11 ಫೆಬ್ರುವರಿ 2021, 16:28 IST
ಚಿಕ್ಕಮಗಳೂರು ತಾಲ್ಲೂಕಿನ ವಾಟೆಖಾನ್‌ ಎಸ್ಟೇಟ್‌ನಲ್ಲಿ ಗುರುವಾರ ಕಾರ್ಮಿಕರು ಬ್ಯಾಂಕ್‌ ಅಧಿಕಾರಿಗಳೊಂದಿಗೆ ಮಾತನಾಡಿದರು.
ಚಿಕ್ಕಮಗಳೂರು ತಾಲ್ಲೂಕಿನ ವಾಟೆಖಾನ್‌ ಎಸ್ಟೇಟ್‌ನಲ್ಲಿ ಗುರುವಾರ ಕಾರ್ಮಿಕರು ಬ್ಯಾಂಕ್‌ ಅಧಿಕಾರಿಗಳೊಂದಿಗೆ ಮಾತನಾಡಿದರು.   

ಚಿಕ್ಕಮಗಳೂರು: ಸಾಲ ಬಾಕಿ ಬಾಬ್ತಿಗೆ ತಾಲ್ಲೂಕಿನ ಹಿರೇಕೊಳಲೆ ಗ್ರಾಮದ 214 ಎಕರೆ ವಾಟೆಖಾನ್‌ ಕಾಫಿ ಎಸ್ಟೇಟ್‌ ಅನ್ನು ಯೂನಿಯನ್‌ ಬ್ಯಾಂಕ್‌ ಅಧಿಕಾರಿಗಳು ಗುರುವಾರ ಸುಪರ್ದಿಗೆ ಪಡೆದರು.

ಎಸ್ಟೇಟ್‌ ಮಾಲೀಕರಾದ ಯು.ಎಂ.ರಮೇಶ್‌ ರಾವ್‌ ಮತ್ತು ಎಸ್‌.ದಿನಕರ ರಾವ್‌ ಅವರು ಕಾಫಿ ತೋಟವನ್ನು ಅಡಮಾನ ಇರಿಸಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ಸಾಲ ಮರುಪಾವತಿ ಮಾಡಿರಲಿಲ್ಲ. ಬ್ಯಾಂಕ್‌ನವರು ‘ಸೆಕ್ಯುರಿಟೈಸೇಷನ್‌ ಅಂಡ್‌ ರಿಕನ್‌ಸ್ಟ್ರಕ್ಷನ್‌ ಆಫ್‌ ಫೈನಾನ್ಶಿಯಲ್‌ ಅಸೆಟ್ಸ್‌ ಅಂಡ್‌ ಎನ್‌ಫೋರ್ಸ್‌ಮೆಂಟ್‌ ಆಫ್‌ ಸೆಕ್ಯುರಿಟಿ ಇಂಟರೆಸ್ಟ್‌ ಆಕ್ಟ್‌–2002’ ಕಾಯ್ದೆ ಅನ್ವಯ 2019ರ
ಮೇ ನಲ್ಲಿ ಮಾಲೀಕರಿಗೆ ನೋಟಿಸ್‌ ನೀಡಿದ್ದರು.

ಮಾಲೀಕರು ಸಾಲದ ಬಾಕಿ ₹ 21 ಕೋಟಿ ಪಾವತಿಸಿರಲಿಲ್ಲ. ಪ್ರಕರಣ ಕೋರ್ಟ್‌ ಮೆಟ್ಟಿಲು ಏರಿತ್ತು. ಚಿಕ್ಕಮಗಳೂರಿನ ಸಿವಿಲ್‌ ಕೋರ್ಟ್‌ ಆಸ್ತಿಯನ್ನು ಸುಪರ್ದಿಗೆ ಪಡೆಯಲು ಫೆ.8ರಂದು ಆದೇಶ ನೀಡಿತ್ತು. ಬ್ಯಾಂಕ್ ಅಧಿಕಾರಿಗಳು ಪೊಲೀಸರ ನೆರವಿನಲ್ಲಿ ಆಸ್ತಿಯನ್ನು ಸುಪರ್ದಿಗೆ ತೆಗೆದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.