ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ 100 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಹಲವಾರು ಸವಾಲುಗಳ ಮಧ್ಯೆ ಅವರು ಹಿಂದಿನಂತಿಲ್ಲ. ಅವರ ಕಾರ್ಯವೈಖರಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅತಂತ್ರ ಶಾಸಕರು, ಉಪ ಚುನಾವಣೆ ಸದ್ದಿನ ನಡುವೆ ಅವರ ಧ್ವನಿ ಇದೆ ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದ್ದು, ಸರಕಾರದ ಅಳಿವು ಉಳಿವಿನ ಪ್ರಶ್ನೆಯೂ ಧುತ್ತನೆ ಕಾಣಿಸಿಕೊಂಡಿದೆ.
100 ದಿನಗಳನ್ನು ಪೂರೈಸಿದ ಯಡಿಯೂರಪ್ಪ ಅವರನ್ನು ಶನಿವಾರ ಪ್ರಜಾವಾಣಿ ಮಾತನಾಡಿಸಿತು.
ಅವರು ಬದಲಾಗಿರುವ ಬಗೆಯೆಂತು?
ರಾಜ್ಯದ ಹಣಕಾಸು ಪರಿಸ್ಥಿತಿ ಹೇಗಿದೆ?
ಪಕ್ಷ, ಸರಕಾರದ ನಡುವೆ ಹೊಂದಾಣಿಕೆ ಇಲ್ಲವೇ?
ಗೋಹತ್ಯೆ ನಿಷೇಧ, ಎಸಿಬಿ ರದ್ದು - ಬಿಜೆಪಿ ಪ್ರಣಾಳಿಕೆಯ ವಿಷಯ ಏನಾಯ್ತು?
ಸಿದ್ದರಾಮಯ್ಯ ನಡವಳಿಕೆ ಬಗ್ಗೆ ಯಡಿಯೂರಪ್ಪ ಏನು ಹೇಳಿದರು?
ಜೆಡಿಎಸ್ ಬಗ್ಗೆ ಯಡಿಯೂರಪ್ಪ ಅವರ ಬದಲಾದ ನಿಲುವು ಏನು?
ಹಾಗೂ ಇನ್ನೂ ಕುತೂಹಲಕಾರಿ ಖಡಕ್ ಪ್ರಶ್ನೆಗಳಿಗೆ ಯಡಿಯೂರಪ್ಪ ಉತ್ತರಿಸಿದ್ದಾರೆ.
ತಿಳಿಯಬೇಕೇ? ಭಾನುವಾರದ ಪ್ರಜಾವಾಣಿ ಪತ್ರಿಕೆ ಕಾಯ್ದಿರಿಸಿಕೊಳ್ಳಿ.
ವಿಶೇಷ ಸಂದರ್ಶನದ ಪೂರ್ಣ ವೀಡಿಯೊ prajavani.net ನಲ್ಲಿ ಭಾನುವಾರ ನೋಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.