
ಪ್ರಜಾವಾಣಿ ವಾರ್ತೆಕಠ್ಮಂಡು (ಐಎಎನ್ಎಸ್): ಅಣ್ಣಾ ಹಜಾರೆ ಅವರ ಚಳವಳಿಯಿಂದ ಪ್ರೇರಣೆ ಪಡೆದಿರುವ ಇಲ್ಲಿನ ಐಟಿಸಿ ಜಂಟಿ ಸಹಭಾಗಿತ್ವದ ಜವಳಿ ಉದ್ದಿಮೆ ಕಾರ್ಮಿಕರು ಕಾರ್ಖಾನೆಯ ಪುನರಾರಂಭಕ್ಕಾಗಿ ಅಣ್ಣಾ ಅವರ ಉಪವಾಸ ಸತ್ಯಾಗ್ರಹದ ಮಾರ್ಗವನ್ನು ತುಳಿದಿದ್ದಾರೆ.
ಉದ್ದಿಮೆಯಲ್ಲಿ ಬಹುತೇಕ ಮಹಿಳಾ ಕಾರ್ಮಿಕರೇ ಇದ್ದು, ಮೊರಾಂಗ್ ಜಿಲ್ಲೆಯಲ್ಲಿರುವ ಸೂರ್ಯ ನೇಪಾಳ ಜವಳಿ ಕಾರ್ಖಾನೆ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮಾವೋವಾದಿಗಳ ದಾಳಿಯ ನಂತರ ಕಳೆದ ತಿಂಗಳು ಉದ್ದಿಮೆಯನ್ನು ಮುಚ್ಚಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.