ADVERTISEMENT

ಈಜಿಪ್ಟ್: ಪ್ರಕ್ಷುಬ್ಧತೆಗೆ ತಿರುಗಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2011, 19:30 IST
Last Updated 29 ಜೂನ್ 2011, 19:30 IST
ಈಜಿಪ್ಟ್: ಪ್ರಕ್ಷುಬ್ಧತೆಗೆ ತಿರುಗಿದ ಪ್ರತಿಭಟನೆ
ಈಜಿಪ್ಟ್: ಪ್ರಕ್ಷುಬ್ಧತೆಗೆ ತಿರುಗಿದ ಪ್ರತಿಭಟನೆ   

ಕೈರೊ (ಪಿಟಿಐ): ಈಜಿಪ್ಟ್‌ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರತ್ತು ಕಲ್ಲುಗಳನ್ನು ತೂರಿದರು. ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು.

 ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಪದಚ್ಯುತಗೊಳಿಸಲು ನಡೆದ ದಂಗೆ ವೇಳೆ ಮೃತಪಟ್ಟ ಕುಟುಂಬದವರು ಸೇರಿದಂತೆ ನೂರಾರು ಮಂದಿ ಮಂಗಳವಾರ ರಾತ್ರಿ ತಹರೀರ್ ವೃತ್ತದಲ್ಲಿ ಜಮಾಯಿಸಿ, ಸಾವಿಗೆ ಕಾರಣರಾದ ಭದ್ರತಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆಪಾದಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆಯಿತು.

ಫೆ.11 ರಂದು ಮುಬಾರಕ್ ಪದಚ್ಯುತಿಗೊಂಡ ನಂತರ ದೇಶವನ್ನು ಮುನ್ನಡೆಸುತ್ತಿರುವ ಈಜಿಪ್ಟ್‌ನ ಸಶಸ್ತ್ರ ಪಡೆಯ ಮುಖಂಡತ್ವ ಹೊಂದಿದ್ದ ಜ. ಮೊಹಮದ್ ಹುಸೈನ್ ತಂತಾವಿ ವಿರುದ್ಧ  ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.