ADVERTISEMENT

ಕಲ್ಲು ಎತ್ತಿಹಾಕಿ ವ್ಯಕ್ತಿಯ ಕೊಲೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 20:32 IST
Last Updated 9 ಮಾರ್ಚ್ 2014, 20:32 IST

ಬೆಂಗಳೂರು: ಜೆ.ಪಿ.ನಗರ ಸಮೀಪದ ಎಲ್‌ಐಸಿ ಕಾಲೊನಿಯಲ್ಲಿ ಶನಿವಾರ ರಾತ್ರಿ ಎ.ಪುಲ್ಲಯ್ಯ (40) ಎಂಬುವರ ಮೇಲೆ ಸಂಬಂಧಿಕನೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಎ.ಪುಲ್ಲಯ್ಯ, ಆಂಧ್ರಪ್ರದೇಶ ಮೂಲ­ದವರು. ಅವರ ತಂಗಿಯ ಪತಿ ಡಿ.ಪುಲ್ಲಯ್ಯ ಎಂಬಾತ ಈ ಕೊಲೆ ಮಾಡಿ­ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್‌ಐಸಿ ಕಾಲೊನಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವರಿಬ್ಬರೂ ಕುಟುಂಬ ಸದಸ್ಯರೊಂದಿಗೆ ಆ ಕಟ್ಟಡದಲ್ಲೇ ವಾಸವಾಗಿದ್ದರು. ಡಿ.ಪುಲ್ಲಯ್ಯ ಮದ್ಯ­ಪಾನ ಮಾಡಲು ಹಣ ಕೊಡುವಂತೆ ಎ.ಪುಲ್ಲಯ್ಯನಿಗೆ ಕೇಳಿದ್ದಾನೆ. ಆದರೆ, ಅವರು ಹಣ ಕೊಡಲು ನಿರಾಕರಿಸಿ­ದ್ದಾರೆ.

ಇದರಿಂದ ಕೋಪಗೊಂಡ ಆತ ಅವರೊಂದಿಗೆ ಜಗಳವಾಡಿದ್ದಾನೆ. ನಂತರ ಕುಟುಂಬ ಸದಸ್ಯರೆಲ್ಲಾ ಮಲ­ಗಿದ್ದ ಸಂದರ್ಭದಲ್ಲಿ ರಾತ್ರಿ ಎರಡು ಗಂಟೆ ಸುಮಾರಿಗೆ ಆತ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿ­ಯಾಗಿ­­ದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.