
ಪ್ರಜಾವಾಣಿ ವಾರ್ತೆಟೋಕಿಯೊ(ಎಎಫ್ಪಿ): ಜಪಾನ್ನ ಮೇಲೆರೆಗಿದ ಟಲಾಸ್ ಚಂಡಮಾರುತ ದಿಂದ ಸತ್ತವರ ಸಂಖ್ಯೆ 41ಕ್ಕೆ ಏರಿದೆ. ಪಶ್ಚಿಮ ಜಪಾನ್ನಲ್ಲಿ ಸಾವಿರಾರು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಇದರಿಂದ ಭಾರಿ ಮಳೆ ಸುರಿಯುತ್ತಿದ್ದು, ಹಲವು ಕಡೆ ಭೂಕುಸಿತದ ಸಮಸ್ಯೆ ಕಾಡುತ್ತಿದೆ. ರಸ್ತೆಗಳು ಕೊಚ್ಚಿಹೋಗಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ವಕಯಾಮಾ ಪ್ರಾಂತ್ಯದಲ್ಲಿ 4,500ಮತ್ತು ನಾರಾದಲ್ಲಿ 400 ಮಂದಿ ನೀರಿನ ಮಧ್ಯೆ ಸಿಲುಕಿಕೊಂಡಿದ್ದು ರಸ್ತೆ ಹಾಗೂ ವಾಯು ಸಂಚಾರ ಕಷ್ಟಕರವಾಗಿರುವುದರಿಂದ ರಕ್ಷಣೆ ಕಾರ್ಯ ನಿಧಾನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.