ಸಿಂಗಪುರ (ಪಿಟಿಐ): ಹಿಂಸಾಚಾರದಿಂದ ನಲುಗಿರುವ ಸಿರಿಯಾದಲ್ಲಿ ತೀವ್ರಗಾಮಿ ಚಟುವಟಿಕೆ ಕೈಗೊಳ್ಳಲು ವ್ಯಕ್ತಿಯೊಬ್ಬನಿಗೆ ಸಹಕಾರ ನೀಡಿದ ಆರೋಪದ ಮೇರೆಗೆ ಭಾರತೀಯ ಮೂಲದ ಗುಲ್ ಮೊಹಮ್ಮದ್ ಮಾರ್ಸಾಚಿ ಮರೈಕಾರ್ ಎಂಬಾತನನ್ನು ಸಿಂಗಪುರ ಅಧಿಕಾರಿಗಳು ಗಡೀಪಾರು ಮಾಡಿದ್ದಾರೆ.
ವಿಧ್ವಂಸಕ ಕೃತ್ಯ ನಡೆಸಲು ಹಜಾ ಫಕ್ರುದ್ದೀನ್ ಉಸ್ಮಾನ್ ಅಲಿ ಎಂಬಾತ ಹೊಂಚು ಹಾಕಿದ್ದು, ಈತನ ಯೋಜನೆಗಳಿಗೆ ಗುಲ್ ಮೊಹಮ್ಮದ್ ಸಹಕಾರ ನೀಡಿದ್ದ. ಗುಲ್ ಮೊಹಮ್ಮದ್ ಸಿಂಗಾಪುರದ ಕಾಯಂ ನಿವಾಸಿಯಾಗಿದ್ದು ಸ್ಥಳೀಯ ಗಣಕಯಂತ್ರಗಳ ನಿರ್ವಹಣೆಯ ಕೆಲಸದಲ್ಲಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.