ಬೀಜಿಂಗ್ (ಪಿಟಿಐ): `ಮೋಸದಿಂದ ವಿಷವುಣಿಸಿ ತಮ್ಮನ್ನು ಹತ್ಯೆ ಮಾಡಲು ಚೀನಾ ಮಹಿಳಾ ಏಜೆಂಟರೊಬ್ಬರಿಗೆ ತರಬೇತಿ ನೀಡಲಾಗುತ್ತಿದೆ~ ಎಂಬ ಬೌದ್ಧ ಧರ್ಮ ಗುರು ದಲೈಲಾಮ ಮಾಡಿರುವ ಆರೋಪವನ್ನು ಚೀನಾ ತಳ್ಳಿ ಹಾಕಿದೆ.
`ಸರ್ಕಾರಕ್ಕೆ ದಲೈಲಾಮ ಅವರನ್ನು ಹತ್ಯೆ ಮಾಡಬೇಕೆಂಬ ಉದ್ದೇಶವಿದ್ದಿದ್ದರೆ, ಇಷ್ಟು ವಯಸ್ಸಾಗುವವರೆಗೆ ಕಾಯಬೇಕಾಗಿರಲಿಲ್ಲ. ಇದೊಂದು ಮೂರ್ಖತನದ ಆರೋಪ~ ಎಂದು ಚೀನಾ ನೀಡಿದ ಪ್ರತಿಕ್ರಿಯೆಯನ್ನು ಇಲ್ಲಿನ `ಗ್ಲೋಬಲ್ ಟೈಮ್ಡೈಲಿ~ ತನ್ನ ಸಂಪಾದಕೀಯದಲ್ಲಿ ಬರೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.