ಕಠ್ಮಂಡು: ನೇಪಾಳದ ಅಧ್ಯಕ್ಷೆಯಾಗಿ ವಿದ್ಯಾದೇವಿ ಭಂಡಾರಿ ಅವರು ಎರಡನೇ ಅವಧಿಗೆ ಸೋಮವಾರ ಆಯ್ಕೆಯಾಗಿದ್ದಾರೆ.
ನೇಪಾಳಿ ಕಾಂಗ್ರೆಸ್ನ ನಾಯಕಿ ಕುಮಾರಿ ಲಕ್ಷ್ಮಿ ರಾಯ್ ಅವರನ್ನು ಭಂಡಾರಿ ಸೋಲಿಸಿದ್ದಾರೆ.
ವಿದ್ಯಾದೇವಿ ಅವರಿಗೆ ಆಡಳಿತಾರೂಢ ಸಿಪಿಎನ್–ಉಎಂಎಲ್ ಮತ್ತು ಸಿಪಿಎನ್ (ಮಾವೋವಾದಿ) ಮೈತ್ರಿಕೂಟ ಸೇರಿದಂತೆ ಹಲವು ಸಣ್ಣ ಪಕ್ಷಗಳು ಬೆಂಬಲ ನೀಡಿದ್ದವು. ಹೀಗಾಗಿ ಚುನಾವಣೆಗೂ ಮುನ್ನವೇ ಅವರು ಜಯಗಳಿಸುವುದು ಖಚಿತವಾಗಿತ್ತು.
‘ತುರ್ತು ಪರಿಸ್ಥಿತಿ ವಿಸ್ತರಣೆ ಇಲ್ಲ’
ಕೊಲಂಬೊ (ಪಿಟಿಐ): ಕೋಮುಗಲಭೆ ನಿಯಂತ್ರಿಸುವ ಸಲುವಾಗಿ ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ವಿಸ್ತರಿಸುವುದಿಲ್ಲ ಎಂದು ಸಚಿವ ರಂಜಿತ್ ಮದ್ದುಮ ಬಂಡಾರ ಹೇಳಿದ್ದಾರೆ. ತುರ್ತು ಪರಿಸ್ಥಿತಿ ವೇಳೆ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.