ADVERTISEMENT

ಮತ್ತೆ ಒಂಬತ್ತು ಮೀನುಗಾರರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಕೊಲಂಬೊ(ಐಎಎನ್ಎಸ್): ಸಮುದ್ರದಲ್ಲಿ ಮೀನುಗಾರಿಕೆ ಹಕ್ಕಿನ ಕುರಿತು ಭಾರತ ಮತ್ತು ಶ್ರೀಲಂಕಾ ನಡುವೆ ಮಾತುಕತೆ ನಡೆಯಲು ಇನ್ನೊಂದು ವಾರವಿರುವಾಗ ಶ್ರೀಲಂಕಾದ ನೌಕಾಪಡೆ ಒಂಬತ್ತು ಭಾರತೀಯ ಮೀನುಗಾರರನ್ನು ಬಂಧಿಸಿದೆ.

ಇದರಿಂದ ಕಳೆದ ಎರಡು ದಿನಗಳಲ್ಲಿ ಬಂಧನ­ಕ್ಕೊಳಗಾದ ಭಾರತೀಯ ಮೀನುಗಾರರ ಸಂಖ್ಯೆ 41ಕ್ಕೇರಿದೆ.

  ಶ್ರೀಲಂಕಾ ನೌಕಾಪಡೆಯ ವಕ್ತಾರ ಕೋಸಲ ವರ್ಣ ಕುಲಸೂರಿಯ ಪ್ರಕಾರ, ಈ ಅಕ್ರಮ ಮೀನುಗಾರರು ಮತ್ತು ಬಲೆಗಾರರನ್ನು ಶ್ರೀಲಂಕಾದ ಉತ್ತರ ಸಮುದ್ರದಲ್ಲಿ ಬಂಧಿಸಿ   ಲಂಕಾ ಪೋಲೀಸರ ವಶಕ್ಕೆ ಒಪ್ಪಿಸಲಾಗಿದೆ.

    ಮೀನುಗಾರಿಕೆ ಹಕ್ಕು ಕುರಿತು ಉಭಯ ದೇಶಗಳ ನಡುವೆ ಎರಡನೇ ಸುತ್ತಿನ  ಮಾತುಕತೆ ಮಾರ್ಚ್ 13 ರಂದು ಕೊಲಂಬೊದಲ್ಲಿ ನಡೆಯಲಿರುವ ಸಂದರ್ಭದಲ್ಲಿ ಈ ಪ್ರಕರಣ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.