ADVERTISEMENT

ರಾವಿ ನದಿಯಲ್ಲಿ ಕುಲದೀಪ್‌ ಚಿತಾಭಸ್ಮ ವಿಸರ್ಜನೆ

ಪಿಟಿಐ
Published 6 ಅಕ್ಟೋಬರ್ 2018, 18:27 IST
Last Updated 6 ಅಕ್ಟೋಬರ್ 2018, 18:27 IST
ಕುಲದೀಪ್‌
ಕುಲದೀಪ್‌   

ಲಾಹೋರ್‌: ಭಾರತದ ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌ ಅವರ ಚಿತಾಭಸ್ಮವನ್ನು ಅವರ ಮೊಮ್ಮಗಳು ಮಂದಿರಾ, ಇಲ್ಲಿನ ರಾವಿನದಿಯಲ್ಲಿ ವಿಸರ್ಜಿಸಿದರು.

ಬಳಿಕ ಪತ್ರಕರ್ತೆ ಮಂದಿರಾ ಅವರು ಲಾಹೋರ್‌ ಪ್ರೆಸ್‌ಕ್ಲಬ್‌ಗೆ ತೆರಳಿ, ಗೌರವ ಸದಸ್ಯತ್ವವನ್ನು ಸ್ವೀಕರಿಸಿದರು. ನಯ್ಯರ್‌ ಅವರಿಗೂ ಪ್ರೆಸ್‌ ಕ್ಲಬ್‌ ಗೌರವ ಸದಸ್ಯತ್ವ ನೀಡಿತ್ತು.

ಆಗಸ್ಟ್‌ 23ರಂದು ನವದೆಹಲಿಯಲ್ಲಿ ಕುಲ್‌ದೀಪ್‌ ಅವರು ನಿಧನರಾಗಿದ್ದರು.

ADVERTISEMENT

ಸ್ಪ್ಯಾನಿಶ್‌ ಗಾಯಕಿ ಕ್ಯಾಬೆಲ್ಲಾ ಇನ್ನಿಲ್ಲ

ಬಾರ್ಸಿಲೋನಾ (ಎಪಿ): ಸ್ಪ್ಯಾನಿಶ್‌ನ ಖ್ಯಾತ ಸಂಗೀತಗಾರ್ತಿ ಮಾಂಟ್‌ಸೆರ್ರಟ್‌ ಕ್ಯಾಬೆಲ್ಲಾ ಅವರು ಇಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಶನಿವಾರ ಬೆಳಿಗ್ಗೆ ಇಲ್ಲಿನ ಸಾನ್‌ ಪಾವ್‌ ಆಸ್ಪ‍ತ್ರೆಯಲ್ಲಿ ಸಾವನ್ನಪ್ಪಿದರು ಎಂದು ಆಸ್ಪತ್ರೆಯ ನಿರ್ದೇಶಕ ಅಬ್ರಹಾಂ ಡೆಲ್‌ ತಿಳಿಸಿದರು.

ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಸೆಪ್ಟೆಂಬರ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರ ನಿಧನಕ್ಕೆ ಪ್ರಧಾನಿ ಪೆಡ್ರೊ ಸಂಕೇಜ್ ಅವರು ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.