ವಾಷಿಂಗ್ಟನ್ (ಪಿಟಿಐ): ಶ್ವೇತಭವನದ ಆವರಣದೊಳಗೆ ಪಟಾಕಿ ಎಸೆದ ಮಧ್ಯವಯಸ್ಕ ವ್ಯಕ್ತಿಯನ್ನು ಬಂಧಿಸಲಾಗಿದೆ.
ನೌಕಾಪಡೆ ಹಡಗುಕಟ್ಟೆಯಲ್ಲಿ ಗುಂಡಿನ ದಾಳಿ ನಡೆದ ಕೆಲವೇ ತಾಸುಗಳಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟಾಕಿ ಸದ್ದಿಗೆ ಆತಂಕಗೊಂಡ ಪತ್ರಕರ್ತರು ಯಾರೋ ಸ್ಫೋಟ ನಡೆಸಿದರೆಂದು ಭಯಪಟ್ಟರು.
‘ಶ್ವೇತಭವನದ ಉತ್ತರ ದ್ವಾರದ ಕಡೆಯಿಂದ ಎರಡು ಬಾರಿ ದೊಡ್ಡ ಸದ್ದು ಕೇಳಿಸಿತು’ ಎಂದು ಜೊನಾಥನ್ ಕರ್ಲ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.