ADVERTISEMENT

ಸವಿತಾ ಪ್ರಕರಣ: ಇಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಲಂಡನ್ (ಪಿಟಿಐ): ಭಾರತೀಯ ಮೂಲದ ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ ಸಾವಿನ ಕುರಿತಂತೆ ಇಲ್ಲಿನ ನ್ಯಾಯಾಲಯದಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಸಮಗ್ರ ವಿಚಾರಣೆ ವೇಳೆ ಐರಿಷ್ ಆಸ್ಪತ್ರೆಯ ಆರೋಗ್ಯ ಕಾಳಜಿ ಗುಣಮಟ್ಟ ಸೇರಿದಂತೆ ಹಲವು ಪ್ರಮುಖ ಅಂಶಗಳ ಕುರಿತು ಪರಿಶೀಲನೆ ನಡೆಯುವ ನಿರೀಕ್ಷೆಯಿದೆ. ಜೀವಕ್ಕೆ ಅಪಾಯ ತಂದೊಡ್ಡಿದ ಸೋಂಕಿಗಿಂತ ಹೆಚ್ಚಾಗಿ ವಿಪರೀತ ಚಳಿಯಿಂದಾಗಿ ಸವಿತಾ ನಡುಗುತ್ತಿದ್ದರು. ಜೊತೆಗೆ ಹಲ್ಲುಗಳನ್ನು ಕಡಿಯುತ್ತಿದ್ದರು ಎಂದು ಗಾಲ್ವೆಯ ಯೂನಿವರ್ಸಿಟಿ ಕಾಲೇಜು ಆಸ್ಪತ್ರೆಯನ್ನು ಉಲ್ಲೇಖಿಸಿ ತನಿಖಾ ವರದಿಯಲ್ಲಿ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.