ADVERTISEMENT

ಸಿಂಗಪುರದಲ್ಲಿ ಬಿಗಿ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಸಿಂಗಪುರ (ಪಿಟಿಐ): ವಿದೇಶಿ ಕಾರ್ಮಿಕರು ವಲಸೆ ಬರುವುದನ್ನು ಇನ್ನಷ್ಟು ನಿಯಂತ್ರಿಸಲಾಗುವುದು ಎಂದು ಹಣಕಾಸು ಖಾತೆಯ ಸಚಿವರೂ ಆಗಿರುವ ಉಪ ಪ್ರಧಾನಿ ಥಹರಮನ್ ಶಣ್ಮುಖರತ್ನಮ್ ತಿಳಿಸಿದ್ದಾರೆ.

ಸರ್ಕಾರದ ಹೊಸ ನಿರ್ಧಾರವು ಭಾರತದ ಕಾರ್ಮಿಕರ ವಲಸೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಬಜೆಜ್ ಭಾಷಣದಲ್ಲಿ ಮಾತನಾಡಿದ ಉಪಪ್ರಧಾನಿ, ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ವಿಧಿಸಿರುವ ವಿದೇಶಿ ಕಾರ್ಮಿಕರ ಮಿತಿಯನ್ನು ಇನ್ನಷ್ಟು ತಗ್ಗಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.