ADVERTISEMENT

ಶ್ರೀಲಂಕಾ ನೌಕಾಪಡೆ ಬಂಧಿಸಿದ್ದ 18 ಭಾರತೀಯ ಮೀನುಗಾರರು ವಾಪಸ್

ಪಿಟಿಐ
Published 13 ಫೆಬ್ರುವರಿ 2024, 6:05 IST
Last Updated 13 ಫೆಬ್ರುವರಿ 2024, 6:05 IST
ಶ್ರೀಲಂಕಾ ನೌಕಾಪಡೆಯ ಬೋಟ್ – (ಶ್ರೀಲಂಕಾ ನೌಕಾಪಡೆ ವೆಬ್‌ಸೈಟ್‌ ಚಿತ್ರ)
ಶ್ರೀಲಂಕಾ ನೌಕಾಪಡೆಯ ಬೋಟ್ – (ಶ್ರೀಲಂಕಾ ನೌಕಾಪಡೆ ವೆಬ್‌ಸೈಟ್‌ ಚಿತ್ರ)   

ಚೆನ್ನೈ: ಇತ್ತೀಚೆಗೆ ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ 18 ಭಾರತೀಯ ಮೀನುಗಾರರು ಮಂಗಳವಾರ ತವರಿಗೆ ಮರಳಿದ್ದಾರೆ.

ಕೊಲಂಬೊದಿಂದ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿದ ಅವರನ್ನು ತಮಿಳುನಾಡು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಬಿಜೆಪಿಯ ಕೆಲವು ಕಾರ್ಯಕರ್ತರು ಬರಮಾಡಿಕೊಂಡರು.

ಕಳೆದ ತಿಂಗಳು ಸಮುದ್ರ ಗಡಿ ಉಲ್ಲಂಘನೆ ಆರೋಪದ ಮೇಲೆ ಲಂಕಾ ನೌಕಾಪಡೆ ಮೀನುಗಾರರನ್ನು ಬಂಧಿಸಿ ಅಲ್ಲಿನ ಜೈಲಿನಲ್ಲಿ ಇರಿಸಿತ್ತು..

ADVERTISEMENT

ಸ್ಥಳೀಯ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ನಂತರ ಅವರನ್ನು ಅಲ್ಲಿನ ಶಿಬಿರದಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದ್ದ ವಾಹನದಲ್ಲಿ ಮೀನುಗಾರರು ರಾಮನಾಥಪುರಕ್ಕೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.