ADVERTISEMENT

ಇಂಡೊನೇಷ್ಯಾ ಹಡಗು ದುರಂತದಲ್ಲಿ 31 ಸಾವು

ನಾವಿಕನ ಸಮಯಪ್ರಜ್ಞೆಯಿಂದ ನೂರಾರು ಮಂದಿ ಪಾರು

ರಾಯಿಟರ್ಸ್
Published 4 ಜುಲೈ 2018, 10:05 IST
Last Updated 4 ಜುಲೈ 2018, 10:05 IST
ರಕ್ಷಣಾ ಕಾರ್ಯಾಚರಣೆಯ ದೃಶ್ಯ –ಏಜೆನ್ಸಿ ಚಿತ್ರ
ರಕ್ಷಣಾ ಕಾರ್ಯಾಚರಣೆಯ ದೃಶ್ಯ –ಏಜೆನ್ಸಿ ಚಿತ್ರ   

ಜಕಾರ್ತ: ಚಂಡಮಾರುತದ ಪರಿಣಾಮ ಇಂಡೊನೇಷ್ಯಾದ ಪ್ರಯಾಣಿಕ ಹಡಗೊಂದು ಸುಲಾವೆಸಿ ದ್ವೀಪ ಪ್ರದೇಶದಲ್ಲಿ ಮುಳುಗಿ 31 ಜನ ಮೃತಪಟ್ಟಿದ್ದಾರೆ.

ಸಮಯಪ್ರಜ್ಞೆ ಮರೆದ ನಾವಿಕ ಮುಳುಗುತ್ತಿರುವ ಹಡಗನ್ನು ದಿಬ್ಬವೊಂದರತ್ತ ಮುನ್ನಡೆಸಿದ್ದು, ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಿದೆ. ಹೀಗಾಗಿ ನೂರಾರು ಪ್ರಯಾಣಿಕರನ್ನು ರಕ್ಷಿಸುವುದು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿ ಸಿಬ್ಬಂದಿಯೂ ಸೇರಿ 164 ಜನ ಇದ್ದರು ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಪಡೆ ತಿಳಿಸಿದೆ. ಹಡಗಿನಲ್ಲಿದ್ದ 130 ಮಂದಿಯನ್ನು ರಕ್ಷಿಸಲಾಗಿದೆ. ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕೂಲ ಹವಾಮಾನದ ನಡುವೆಯೇ ಹಡಗು ಪ್ರಯಾಣ ಆರಂಭಿಸಿತ್ತು. ಅದರಲ್ಲಿ 48 ವಾಹನಗಳೂ ಇದ್ದವು ಎನ್ನಲಾಗಿದೆ.

ಇತ್ತೀಚೆಗೆ ಇಂಡೊನೇಷ್ಯಾದಲ್ಲಿ ಸಂಭವಿಸಿದ ಎರಡನೇ ಹಡಗು ದುರಂತ ಇದಾಗಿದೆ. ಎರಡು ವಾರಗಳ ಹಿಂದೆ ಸುಮಾತ್ರ ಬಳಿ ಸಂಭವಿಸಿದ್ದ ದುರಂತದಲ್ಲಿ 200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.