ಸಾವೊಪೌಲೊ, ಬ್ರೆಜಿಲ್: ‘ಚೀನಾವು ಭಾರತದ ಜೊತೆಗಿನ ಗಡಿ ಒಪ್ಪಂದಗಳನ್ನು ಕಡೆಗಣಿಸುತ್ತಿದೆ. ಆ ಮೂಲಕ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಕರಿ ನೆರಳು ಆವರಿಸುವಂತೆ ಮಾಡುತ್ತಿದೆ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾನುವಾರ ಹೇಳಿದ್ದಾರೆ.
‘1990ರ ಒಪ್ಪಂದದ ಪ್ರಕಾರ, ಗಡಿ ಭಾಗದಲ್ಲಿ ಯಾರೂ ಸೇನಾ ತುಕಡಿ ನಿಯೋಜಿಸುವಂತಿಲ್ಲ. ಈ ನಿಯಮವನ್ನು ಚೀನಾ ಉಲ್ಲಂಘಿಸಿದೆ. ಕೆಲ ವರ್ಷಗಳ ಹಿಂದೆ ಗಾಲ್ವನ್ ಕಣಿವೆಯಲ್ಲಿ ನಡೆದ ಕಾದಾಟದಲ್ಲಿ ಹಲವು ಯೋಧರು ಹುತಾತ್ಮರಾಗಿದ್ದರು. ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.