,
ಬೀಜಿಂಗ್: ಟಿಬೆಟ್ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಭಾರತ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಚೀನಾ ಶುಕ್ರವಾರ ತಾಕೀತು ಮಾಡಿದೆ.
ಈ ಮೂಲಕ, ‘ದಲೈ ಲಾಮಾ ಅವರ ಅವತಾರವು ಸ್ಥಾಪಿತ ಆಚಾರದಂತೆ ಮತ್ತು ಅವರ ಇಚ್ಛೆಯ ಪ್ರಕಾರ ನಡೆಯಬೇಕು’ ಎಂದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
‘14ನೇ ದಲೈ ಲಾಮಾ ಅವರ ಚೀನಾ ವಿರೋಧಿ ಪ್ರತ್ಯೇಕತಾವಾದಿ ನಿಲುವುಗಳ ಬಗ್ಗೆ ಭಾರತ ಸ್ಪಷ್ಟತೆ ಹೊಂದಿರಬೇಕು. ಷಿ–ಜಂಗ್ (ಟಿಬೆಟ್) ಕುರಿತ ವಿಚಾರಗಳಲ್ಲಿ ಚೀನಾ ಬದ್ಧತೆಯನ್ನು ಭಾರತವು ಗೌರವಿಸಬೇಕು’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ಮಾವೊ ನಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಟಿಬೆಟ್ ವಿಚಾರಗಳ ಕುರಿತ ಭಾರತದ ಮಾತು ಮತ್ತು ಕೃತಿಯಲ್ಲಿ ಎಚ್ಚರಿಕೆ ಇರಬೇಕು. ಚೀನಾ–ಟಿಬೆಟ್ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪವನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಅದು ಭಾರತ–ಚೀನಾ ದ್ವಿಪಕ್ಷೀಯ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ’ ಎಂದು ಎಚ್ಚರಿಸಿದರು.
ಮುಂದಿನ ದಲೈ ಲಾಮಾ ಯಾರೆಂಬ ನಿರ್ಧಾರವನ್ನು ಸ್ಥಾಪಿತ ಸಂಸ್ಥೆ ಮತ್ತು ಟಿಬೆಟಿಯನ್ ಬೌದ್ಧ ನಾಯಕರು ತೆಗೆದುಕೊಳ್ಳುತ್ತಾರೆಯೇ ಹೊರತು, ಬೇರೆ ಯಾರಿಗೂ ಅದರ ಹಕ್ಕಿಲ್ಲ ಎಂದು ಕಿರಣ್ ರಿಜಿಜು ಗುರುವಾರ ಪ್ರತಿಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.