ADVERTISEMENT

ಪಹಲ್ಗಾಮ್ ದಾಳಿಯೇ ಸಂಘರ್ಷಕ್ಕೆ ಕಾರಣ: ಭಾರತದ ರಾಯಭಾರಿ ವಿನಯ್ ಕುಮಾರ್

ಪಿಟಿಐ
Published 19 ಮೇ 2025, 15:48 IST
Last Updated 19 ಮೇ 2025, 15:48 IST
<div class="paragraphs"><p>ಭಾರತ–ಪಾಕಿಸ್ತಾನ</p></div>

ಭಾರತ–ಪಾಕಿಸ್ತಾನ

   

– ಗೆಟ್ಟಿ ಚಿತ್ರ

ಮಾಸ್ಕೊ: ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಉಲ್ಬಣಿಸಲು ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯೇ ಕಾರಣ. ಭಾರತವು ಆ ದಾಳಿಗೆ ಪ್ರತಿಕ್ರಿಯೆ ನೀಡುವುದು ಅನಿವಾರ್ಯವಿತ್ತು ಎಂದು ರಷ್ಯಾದಲ್ಲಿರುವ ಭಾರತದ ರಾಯಭಾರಿ ವಿನಯ್ ಕುಮಾರ್ ಹೇಳಿದ್ದಾರೆ.

ADVERTISEMENT

ರಷ್ಯಾದ ತೈಲವನ್ನು ಭಾರತದ ಮಾರುಕಟ್ಟೆಗೆ ಪೂರೈಸಲು ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದೂ ಅವರು ‘ಇಸ್‌ವೆಸ್ಟಿಯಾ’ ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಪಾಕಿಸ್ತಾನದ ಸೇನಾ ಮುಖ್ಯಸ್ಥರು ಸಂಘರ್ಷ ವಿರಾಮಕ್ಕೆ ಒಲವು ತೋರಿಸಿ, ಭಾರತದ ಸೇನಾ ಮುಖ್ಯಸ್ಥರೊಟ್ಟಿಗೆ ಮೊದಲು ಮಾತುಕತೆ ನಡೆಸಿದರು. ಹೀಗಾಗಿ ಸಂಘರ್ಷ ಶಮನಗೊಂಡಿತು ಎಂದು ವಿನಯ್ ಕುಮಾರ್ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.