ADVERTISEMENT

ಶ್ರೀಲಂಕಾ: ದೋಣಿ ತಂಗುದಾಣ ಅಭಿವೃದ್ಧಿಗೆ ಭಾರತ ₹8 ಕೋಟಿ ನೆರವು

ಪಿಟಿಐ
Published 2 ಜನವರಿ 2025, 15:17 IST
Last Updated 2 ಜನವರಿ 2025, 15:17 IST
-
-   

ಕೊಲಂಬೊ: ದೋಣಿಗಳ ನಿರ್ಮಾನ, ದುರಸ್ತಿ ಕಾರ್ಯ ನಡೆಯುವ, ಶ್ರೀಲಂಕಾದ ಉತ್ತರದಲ್ಲಿರುವ ಕರೈನಗರ ಬೋಟ್‌ಯಾರ್ಡ್‌ (ದೋಣಿಗಳ ತಂಗುದಾಣ) ಅಭಿವೃದ್ಧಿಗೆ ಭಾರತ ₹ 8 ಕೋಟಿ ( 29 ಕೋಟಿ ಶ್ರೀಲಂಕಾ ರೂಪಾಯಿ) ನೀಡಲಿದೆ ಎಂದು ಇಲ್ಲಿನ ಭಾರತ ಹೈಕಮಿಷನ್‌ ಗುರುವಾರ ಹೇಳಿದೆ.

‘ಈ ಕುರಿತ ಒಪ್ಪಂದಕ್ಕೆ ಭಾರತದ ಹೈಕಮಿಷನರ್ ಸಂತೋಷ್‌ ಝಾ ಹಾಗೂ ಈ ಹಿಂದೆ ಭಾರತದಲ್ಲಿ ಶ್ರೀಲಂಕಾ ಹೈಕಮಿಷನರ್ ಆಗಿದ್ದ ಕ್ಷೇನುಕ ಧಿರೇನಿ ಸೆನೆವಿರತ್ನೆ ಅವರು ಡಿ.16ರಂದು ಸಹಿ ಹಾಕಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT