ADVERTISEMENT

ನೇಪಾಳ: ಆಕ್ಸಿಜನ್‌ ಘಟಕ ಸ್ಫೋಟ– ಭಾರತದ ವ್ಯಕ್ತಿ ಸಾವು

ಪಿಟಿಐ
Published 21 ಏಪ್ರಿಲ್ 2022, 13:27 IST
Last Updated 21 ಏಪ್ರಿಲ್ 2022, 13:27 IST

ಕಠ್ಮಂಡು: ನೇಪಾಳದ ಲಲಿತಪುರ ಜಿಲ್ಲೆಯ ಕೈಗಾರಿಕೆ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಆಮ್ಲಜನಕ ಘಟಕ ಸ್ಫೋಟಗೊಂಡ ಭಾರತದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಗಾಯಗೊಂಡ ಏಳು ಮಂದಿ ಸ್ಥಳೀಯರನ್ನು ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಗರಮಠ ಆಮ್ಲಜನಕ ಘಟಕದಲ್ಲಿ ಕಾರ್ಮಿಕರು ಸಿಲಿಂಡರ್‌ಗೆ ಅನಿಲ ಭರ್ತಿ ಮಾಡುವ ವೇಳೆ ದುರಂತ ಸಂಭವಿಸಿದೆ. ಸ್ಫೋಟದಿಂದ ಘಟಕದ ಕಟ್ಟಡ ಹಾಗೂ ಸಮೀಪದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ಲಲಿತಪುರದ ಎಸ್ಪಿ ಸಿದ್ಧ ಬಿಕ್ರಮ್‌ ಶಾ ತಿಳಿಸಿದರು.

ಗೃಹ ಸಚಿವ ಬಾಲಕೃಷ್ಣ ಖಂಡ್‌ ಅವರು ಘಟನೆಯ ತನಿಖೆಗೆ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.